
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:- ಇತ್ತೀಚೆಗೆ ನಡೆದ ಎಪಿಎಮ್ಸಿ ಚುನಾವಣೆಯಲ್ಲಿ ಬೆಳಗಾವಿ ಎಪಿಎಮ್ಸಿ ಅಧ್ಯಕ್ಷರಾಗಿ ಆಯ್ಕೆಯಾದ ಯುವರಾಜ ನಾಗೋಜಿ ಕದಮ ಇವರನ್ನು ಶುಕ್ರವಾರ ಪಟ್ಟಣ ವ್ಯಾಪಾರ ಸಮಿತಿ ಮಹಾನಗರ ಪಾಲಿಕೆಯ ನೂತನ ಸದಸ್ಯರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಇಮಾಮಹುಸೇನ ಅಮೀನಸಾಬ ನಧಾಪ, ಪ್ರಸಾದ ರಾಮಚಂದ್ರ ಕವಳೆಕರ, ಲಕ್ಷ್ಮಣ ಕಾಶಪ್ಪ ಲಮಾಣಿ, ಸಂಗೀತಾ ಅಪ್ಪಾಸಾಹೇಬ ಖೊತ, ವಿಜಯ ಮನೋಹರ ಚವ್ಹಾಣ, ಕಾಶಿನಾಥ ಮಹಾದೇವ ಮುಚ್ಚಂಡಿ, ಶಾಂತವ್ವ ಪೂಜೇರಿ ಉಪಸ್ಥಿತರಿದ್ದರು.