
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜನ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿಂದ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಸೇವಾ ಕೋವಿಡ್ -19 ಕೇಂದ್ರದ ಸಮಾರೋಪ ಸಮಾರಂಭ ರವಿವಾರ ಅನಗೋಳದ ಸಂತಮೀರಾ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಜರುಗಿತು.

ಸಮಾರೋಪ ಸಭೆಯಲ್ಲಿ ಸುಮಾರು 124 ಚಿಕಿತ್ಸೆ ಪಡೆದ ಗುಣಮುಖರಾದ ರೋಗಿಗಳು ಭಾಗವಹಿಸಿದ್ದರು.
ಉತ್ತಮವಾಗಿ ಚಿಕಿತ್ಸೆ ನೀಡಿದ ವೈದ್ಯರು, ಶೂಶ್ರಕ/ಶೂಶ್ರಕಿಯರು, ದಾನಿಗಳನ್ನು ಹೃದಯ ಪೂರ್ವಕವಾಗಿ ಅವರು ಸೇವೆ ಸ್ಮರಿಸಿ ಸನ್ಮಾನ ಸಲ್ಲಿಸಲಾಯಿತು.
ಗುಣಮುಖರಾದ ರೋಗಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ಪ್ರೀತಿ ವಿಶ್ವಾಸದ ಸೇವಾ ಚಿಕಿತ್ಸಾ ವ್ಯವಸ್ಥೆಗೆ ಧನ್ಯವಾದ ಅರ್ಪಿಸಿದರು.