Latest

ಒಂದೇ ದಿನ ತಲಾ ಕೋಟಿ ರೂ.ಗಳ 4 ಕಾರು ಖರೀದಿ; ಯೋಗೀಶ್ವರ, ಜಾರಕಿಹೊಳಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಿ.ಪಿ.ಯೋಗೇಶ್ವರ್ ಪರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬ್ಯಾಟಿಂಗ್ ವಿಚಾರವಾಗಿ ಕಿಡಿ ಕಾರಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ, ರಮೇಶ್ ಜಾರಕಿಹೊಳಿ ಹೈಕಮಾಂಡ್ ನಂತೆ ವರ್ತಿಸುವುದು ಬೇಡ ಎಂದಿದ್ದಾರೆ.

ಸಂಪುಟ ವಿಸ್ತರಣೆ ವಿಚಾರವಾಗಿ ತಮ್ಮ ಅಸಮಾಧಾನ, ನೂತನ ಸಚಿವರ ಬಗ್ಗೆ ದೂರು ಸೇರಿದಂತೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಯಾಗಿ ದೂರು ನೀಡಿದ ರೇಣುಕಾಚಾರ್ಯ, ಬಳಿಕ ಮಾತನಾಡಿ, ರಮೇಶ್ ಜಾರಕಿಹೊಳಿ ವರಿಷ್ಠರಂತೆ ವರ್ತಿಸುವ ಅಗತ್ಯವಿಲ್ಲ ಎಂದರು.

ಸಿ.ಪಿ.ಯೋಗೇಶ್ವರ್ ಭ್ರಷ್ಟಾಚಾರದಿಂದ ಆಸ್ತಿ ಸಂಪಾದಿಸಿದ್ದಾರೆ. ಹೀಗಿರುವಾಗ 9 ಕೋಟಿ ಸಾಲ ಮಾಡಿದ್ದಾರೆ, ಮನೆ ಮಾರಿದ್ದಾರೆ ಎಂದು ಸಚಿವ ಜಾರಕಿಹೊಳಿ ಹೇಳುತ್ತಿರುವುದು ಅಚ್ಚರಿಯೆನಿಸಿದೆ. ಯೋಗೇಶ್ವರ್ ಭ್ರಷ್ಟಾಚಾರದಿಂದ ದಿಪಾವಳಿ ದಿನವೇ ತಲಾ ಕೋಟಿ ರೂ.ಗಳ 4 ಐಷಾರಾಮಿ ಕಾರು ಖರೀದಿಸಿದ್ದಾರೆ. ಹೊಸ ಬಂಗಲೆ ಖರೀದಿ ಮಾಡಿದ್ದಾರೆ. ಹಲವೆಡೆ ಆಸ್ತಿ ಖರೀದಿಸಿದ್ದಾರೆ. ಇದರ ನಡುವೆ ಅವರು ಯಾಕೆ 9 ಕೋಟಿ ಸಾಲ ಮಾಡಿದರು? ಸಿ.ಪಿ ಯೋಗೇಶ್ವರ್ ರಿಂದ ರಾಜ್ಯ ಬಿಜೆಪಿ ಸರ್ಕಾರ ಬಂದಿಲ್ಲ. ಯೋಗೇಶ್ವರ್ ಮುಖ ನೋಡಿ ಬೇರೆ ಪಕ್ಷದವರು ಬಿಜೆಪಿಗೆ ಬಂದೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Home add -Advt

Related Articles

Back to top button