Kannada NewsKarnataka News

ಸಂಸ್ಕಾರ ಭಾರತಿಯಿಂದ 2 ಸ್ಪರ್ಧೆಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಂಸ್ಕಾರ ಭಾರತಿ ಜ.24ರಂದು ಐಎಂಇಆರ್ ಸಭಾಭವನದಲ್ಲಿ 2 ಸ್ಪರ್ಧೆಗಳನ್ನು ಆಯೋಜಿಸಿದೆ. ಒಂದು ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ, ಮತ್ತೊಂದು ತಿಳಗುಳ್ ಆರ್ನಮೆಂಟ್ ತಯಾರಿಕೆ ಸ್ಪರ್ಧೆ.

ದೇಶಭಕ್ತಿ ಗೀತೆ ಸ್ಪರ್ಧೆ 15 ವರ್ಷದೊಳಗಿನವರಿಗೆ ಮತ್ತು ಇತರರಿಗಾಗಿ ಪ್ರತ್ಯೇಕ ಸ್ಪರ್ಧೆ ನಡೆಯುವುದು. ಗರಿಷ್ಠ 3 ನಿಮಿಷದ ಆಡಿಯೋ, ವೀಡಿಯೋವನ್ನು ವಾಟ್ಸಪ್ ಅಥವಾ ಟೆಲಿಗ್ರಾಂ ಮೂಲಕ ಜ.20ರೊಳಗೆ 8050444693 ನಂಬರಿಗೆ ಕಳಿಸಬೇಕು. ಜ.24ರಂದು ಅಂತಿಮ ಸುತ್ತು ನಡೆಯಲಿದೆ. ಅಲ್ಲಿ ಗರಿಷ್ಠ 5 ನಿಮಿಷ ಅವಕಾಶವಿದೆ. ಎರಡೂ ಕಡೆ ಮ್ಯೂಸಿಕ್ ಆರ್ಟಿಸ್ಟ್ ಮತ್ತು ಕರೋಕೆ ಬಳಸಲು ಅವಕಾಶವಿದೆ. 50 ರೂ. ಪ್ರವೇಶ ಫೀ ನಿಗದಿಪಡಿಸಲಾಗಿದೆ.

ತಿಳಗುಳ್ ಆರ್ನಮೆಂಟ್ ತಯಾರಿಕೆ ಸ್ಪರ್ಧೆಗ 1 ಗಂಟೆ ನಿಗದಿಪಡಿಸಲಾಗಿದ್ದು, ಥೀಮ್ ನ್ನು ಸ್ಥಳದಲ್ಲೇ ಹೇಳಲಾಗುತ್ತದೆ. ಅಗತ್ಯ ಸಾಮಗ್ರಿಗಳನ್ನು ಸ್ಪರ್ಧಾಳುಗಳೇ ತರಬೇಕು. 20 ರೂ. ಪ್ರವೇಶ ಫೀ ಇದೆ.

ಜ.24ರಂದು ಸಂಜೆ 4.30ರಿಂದ ಬಹುಮಾನ ವಿತರಣೆ ನಡೆಯಲಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button