Latest

ನಿಂತಿದ್ದ ಕ್ಯಾಂಟರ್ ಗೆ ಕ್ರೂಸರ್ ಡಿಕ್ಕಿ; ವಾಹನದಲ್ಲೇ ಸಿಲುಕಿ ಹೊರಬರಲಾಗದೇ ವ್ಯಕ್ತಿ ಪರದಾಡಿದ

ಪ್ರಗತಿವಾಹಿನಿ ಸುದ್ದಿ; ಹಾವೇರಿ: ನಿಂತಿದ್ದ ಕ್ಯಾಂಟರ್ ಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ವಕ್ತಿಯೊಬ್ಬ ನುಜ್ಜುಗುಜ್ಜಾದ ವಾಹನದಲ್ಲಿಯೇ ಸಿಲಿಕಿಕೊಂಡಿದ್ದು, ಹೊರಬರಲಾಗದೇ ಪರದಾಡುತ್ತಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಹಾವೇರಿ ಸಂಚಾರಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಪಘಾತದ ತೀವ್ರತೆಗೆ ಕ್ರೂಸರ್ ವಾಹನ ಸಂಪುರ್ಣ ನುಜ್ಜುಗುಜ್ಜಾಗಿದೆ. ಸತೀಶ್ ಕಾಸರಕರ ಎಂಬ ವ್ಯಕ್ತಿಯ ಕಾಲು ಕ್ರೂಸರ್ ನಲ್ಲೇ ಸಿಲುಕಿಕೊಂಡಿದ್ದು, ಹೊರಬರಲಾಗದೇ ಪರದಾಡುತ್ತಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ 108 ಸಿಬ್ಬಂದಿ ಹಾಗೂ ಪೊಲೀಸರು ಸತೀಶ್ ನನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button