Latest

ಸುಮಲತಾ ಪ್ಲ್ಯಾನ್ ಪ್ಲಾಪ್ ಮಾಡಲು ಕೈ-ತೆನೆ ತಂತ್ರ; ಬಿಜೆಪಿ ಬೆಂಬಲವೂ ಇಲ್ಲ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಕಣಕ್ಕಿಳಿಯುವ ಕನಸು ಕಟ್ಟಿಕೊಂಡು ಯುದ್ದಭೂಮಿಗೆ ಇಳಿದಿರುವ ಸುಮಲತಾ ಅಂಬರೀಶ್ ಅವರ ಕನಸನ್ನು ಭಗ್ನ ಮಾಡಲು ಕಾಂಗ್ರೆಸ್ ಕಾರ್ಯಾಚರಣೆ ಆರಂಭಿಸಿದೆ. ಇದಕ್ಕೆ ಕಾರಣ ದೋಸ್ತಿ ಪಕ್ಷ ಜೆಡಿಎಸ್ ನ ತಾಖೀತು.

ಮಂಡ್ಯದಿಂದ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಕಣಕ್ಕಿಳಿಯಬೇಕೆಂದು ಸುಮಲತಾ ನಿರ್ಧರಿಸಿದ್ದರು. ಈ ಬಗ್ಗೆ ಹಲವು ರೀತಿಯಿಂದ ಪ್ರಯಚತ್ನ ನಡೆಸಿದ್ದರು. ಆದರೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗುವುದು ಕಷ್ಟ ಎನ್ನುವ ಸ್ಥಿತಿ ಬಂದಾಗ ಪಕ್ಷೇತರರಾಗಿಯಾದರೂ ಸ್ಪರ್ಧಿಸಬೇಕೆಂದು ಅವರು ನಿರ್ಧರಿಸಿದ್ದರು. 

ಕ್ಷೇತ್ರದಲ್ಲಿ ಹಲವು ಸುತ್ತು ಪ್ರವಾಸ ನಡೆಸಿದ್ದ ಅವರು, ಮಂಡ್ಯದಿಂದಲೇ ರಾಜಕೀಯ ಜೀವನ ಆರಂಭಿಸುವುದಾಗಿ ಘೋಷಿಸಿದ್ದರು. ಹಲವಾರು ಕಾಂಗ್ರೆಸ್ ನಾಯಕರು ಸುಮಲತಾ ಬೆನ್ನಿಗೆ ನಿಲ್ಲುವ ಭರವಸೆ ನೀಡಿದ್ದರು.

Home add -Advt

ಆದರೆ, ಮಂಡ್ಯದಿಂದ ಮಗ ನಿಕಿಲ್ ನನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾವುದೇ ಕಾರಣದಿಂದ ಸುಮಲತಾ ಸ್ಪರ್ಧಿಸಬಾರದು ಎಂದು ಕಾಂಗ್ರೆಸ್ ಗೆ ಕಟ್ಟಪ್ಪಣೆ ಮಾಡಿದ್ದಾರೆ. ಹೇಗಾದರೂ ಮಾಡಿ ಸುಮಲತಾ ಸ್ಪರ್ಧಿಸದಂತೆ, ಕಾಂಗ್ರೆಸ್ ಕಾರ್ಯಕರ್ತರ್ಯಾರೂ ಅವರನ್ನು ಬೆಂಬಲಿಸದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕುಮಾರಸ್ವಾಮಿ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಡಿ.ಕೆ.ಶಿವಕುಮಾರ ಅರಿಗೆ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಮಂಡ್ಯಕ್ಕೆ ಧಾವಿಸಿದ್ದ ಡಿ.ಕೆ.ಶಿವಕುಮಾರ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ, ಯಾರೂ ಸುಮಲತಾ ಬೆನ್ನಿಗೆ ನಿಲ್ಲದಂತೆ ಸೂಚಿಸಿದ್ದಾರೆ. ಎಲ್ಲರೊಂದಿಗೆ ಚರ್ಚಿಸಿದ ಅವರು ಬಹುತೇಕ ನಾಯಕರು ಸುಮಲತಾಗೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸುಮಲತಾಗೆ ಶಾಕ್ ಆಗಿದ್ದು, ಮುಂದಿನ ನಿರ್ಧಾರದ ಬಗ್ಗೆ ಯೋಚಿಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಸುಮಲತಾ ಅವರನ್ನು ಸಂಪರ್ಕಿಸಬಹುದೆನ್ನುವ ನಿರೀಕ್ಷೆಯೂ ಬಹುತೇಕ ಹುಸಿಯಾಗಿದೆ. ಬಿಜೆಪಿ ಸುಮಲತಾ ಬದಲು ತಮ್ಮದೇ ಪಕ್ಷದ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. 

ಇನ್ನು 2-3 ದಿನದಲ್ಲಿ ಸುಮಲತಾ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಕಣದ ಚಿತ್ರಣ ಗೊತ್ತಾಗಲಿದೆ.

Related Articles

Back to top button