Kannada NewsKarnataka News

ರೋಟರಿ ಕ್ಲಬ್ ನಿಂದ ಸಾಧಕ ವೈದ್ಯರು, ಚಾರ್ಟರ್ಡ್ ಅಕೌಂಟಂಟ್ ಗಳಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವೈದ್ಯರ ದಿನ ಹಾಗೂ ಚಾರ್ಟರ್ಡ್ ಅಕೌಂಟಂಟ್ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಬೆಳಗಾವಿ ದರ್ಪಣ್ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
 ಮಕ್ಕಳ ತಜ್ಞ ಡಾ.ರಾಜಶೇಖರ ವಾಲಿ, ಹೃದ್ರೋಗ ತಜ್ಞ ಡಾ.ಪ್ರಸಾದ ಎಂಆರ್, ಮೆಡಿಕಲ್ ಆಫೀಸರ್ ಡಾ.ಜಯಾನಂದ ಧನ್ವಂತ್, ಆಪ್ತ ಸಮಾಲೋಚಕಿ ಡಾ.ಸ್ಫೂರ್ತಿ ಮಾಸ್ತಿಹೊಳಿ, ದಂತ ತಜ್ಞೆ ಡಾ. ತೇಜಸ್ವಿನಿ ಹೊಂಗಲ್, ಚಾರ್ಟರ್ಟ್ ಅಕೌಂಟಂಟ್ ಗಳಾದ ರಾಜೀವ ಪಂಡಿತ, ಮಹಾವೀರ ಉಪಾಧ್ಯೆ, ವಿದ್ಯಾಧರ ಕಬ್ಬೂರ್ ಅವರನ್ನು ಸನ್ಮಾನಿಸಲಾಯಿತು.
 ರೋಟರಿ ಅಸಿಸ್ಟಂಟ್ ಗವರ್ನರ್ ದಿನೇಶ ಕಾಳೆ, ರೋಟರಿ ಕ್ಲಬ್ ಅಧ್ಯಕ್ಷೆ ಪುಷ್ಪಾ ಪರ್ವತರಾವ್, ಕಾರ್ಯದರ್ಶಿ ಸೌಮ್ಯಾ ಪಾಟೀಲ, ಇವೆಂಟರ್ ಚೇರಮನ್ ಸವಿತಾ ಹೆಬ್ಬಾರ್ ಮತ್ತು ಕ್ಲಬ್ ಸದಸ್ಯೆಯರು ಉಪಸ್ಥಿತರಿದ್ದರು.

Related Articles

Back to top button