Kannada NewsKarnataka NewsLatest

ಇಬ್ಬರು ಹೆಣ್ಣುಮಕ್ಕಳಿಗೆ ವಿಷ ಕುಡಿಸಿ ಕೊಂದ, ಆತ ಸಾಯಲೇ ಇಲ್ಲ ! ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ಕೊಂದ ತಂದೆಯೊರ್ವ, ತಾನೂ ವಿಷಯ ಕುಡಿದರೂ ಬದುಕುಳಿದ.

ಬೆಳಗಾವಿಯ ಕಂಗ್ರಾಳಿ ಕೆಎಚ್ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ವಿಜಯನಗರದ ನಿವಾಸಿಯಾಗಿರುವ ಅನಿಲ್ ಚಂದ್ರಕಾಂತ ಬಾಂದೇಕರ್(45) ಪಾಪಿ ತಂದೆ. ಈತ ಪುತ್ರಿಯರಾದ 8 ವರ್ಷದ ಅಂಜಲಿ ಮತ್ತು 4 ವರ್ಷದ ಅನನ್ಯಾಳಿಗೆ ವಿಷ ಕುಡಿಸಿದ. ನಂತರ ತಾನೂ ಕುಡಿದ.

ಮಕ್ಕಳಿಬ್ಬರು ಇಹಲೋಕ ತ್ಯಜಿಸಿದರು. ಆದರೆ ಆತ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್; ಭೀತಿ ಅನಗತ್ಯ ಎಂದ ನ್ಯಾಯಾಲಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button