
ಹೆಚ್ಚಿದ್ದ ಆತಂಕ, ಅರಣ್ಯ ಅಧಿಕಾರಿಗಳಿಂದ ಹುಡುಕಾಟ
ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ: ಹುಬ್ಬಳ್ಳಿ ನೊಂದಣಿ ಹೊಂದಿರುವ ಮೂರು ಬೈಕಿನಲ್ಲಿ ಬಂದ 6 ಜನ ಪ್ರವಾಸಿಗರು ಇನ್ನೂ ಶಿರ್ಲೆ ಫಾಲ್ಸ್ ನಿಂದ ಮರಳಿ ಬಾರದಿರುವುದು ಆತಂಕಕ್ಕೆ ಕಾರಣವಾಗಿದೆ.
ಅಂಕೋಲಾ -ಯಲ್ಲಾಪುರ ಮಧ್ಯದ ಶಿರ್ಲೆ ಜಲಪಾತಕ್ಕೆ ಇವರು ಪ್ರವಾಸಕ್ಕೆ ಬಂದಿದ್ದರು. ಗುರುವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು ಇಲ್ಲಿ ಇರುವ ಸಂಕ ಕೊಚ್ವಿ ಹೊಗಿರುವ ಶಂಕೆ ವ್ಯಕ್ತವಾಗಿದೆ. ಪ್ರವಾಸಿಗರ ಹುಡುಕಾಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದು ರಾತ್ರಿ ತನಕ ಯಾವುದೇ ಮಾಹಿತಿ ಸಿಕ್ಕಿಲ್ಲ.