ಇನ್ನೂ ಪತ್ತೆಯಾಗದ ಶಿರ್ಲೆ ಫಾಲ್ಸ್ ಗೆ ತೆರಳಿದ್ದ 6 ಪ್ರವಾಸಿಗರು

 ಹೆಚ್ಚಿದ್ದ ಆತಂಕ, ಅರಣ್ಯ  ಅಧಿಕಾರಿಗಳಿಂದ ಹುಡುಕಾಟ

ಪ್ರಗತಿವಾಹಿನಿ ಸುದ್ದಿ,  ಯಲ್ಲಾಪುರ: ಹುಬ್ಬಳ್ಳಿ ನೊಂದಣಿ ಹೊಂದಿರುವ ಮೂರು ಬೈಕಿನಲ್ಲಿ ಬಂದ 6 ಜನ ಪ್ರವಾಸಿಗರು ಇನ್ನೂ ಶಿರ್ಲೆ ಫಾಲ್ಸ್ ನಿಂದ ಮರಳಿ ಬಾರದಿರುವುದು ಆತಂಕಕ್ಕೆ ಕಾರಣವಾಗಿದೆ.
ಅಂಕೋಲಾ -ಯಲ್ಲಾಪುರ ಮಧ್ಯದ ಶಿರ್ಲೆ ಜಲಪಾತಕ್ಕೆ ಇವರು ಪ್ರವಾಸಕ್ಕೆ ಬಂದಿದ್ದರು. ಗುರುವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು ಇಲ್ಲಿ ಇರುವ ಸಂಕ ಕೊಚ್ವಿ ಹೊಗಿರುವ ಶಂಕೆ ವ್ಯಕ್ತವಾಗಿದೆ. ಪ್ರವಾಸಿಗರ ಹುಡುಕಾಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದು ರಾತ್ರಿ ತನಕ ಯಾವುದೇ ಮಾಹಿತಿ ಸಿಕ್ಕಿಲ್ಲ.

Related Articles

Back to top button