Latest

ಉದ್ಯಮಿಯ ಭೀಕರ ಕೊಲೆ: ಅನೈತಿಕ ಸಂಬಂಧ ಶಂಕೆ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಕೊಲೆಯಾದ ಉದ್ಯಮಿಯ ರುಂಡ ಮುಂಡಗಳು ಪ್ರತ್ಯೇಕವಾಗಿ ತೆಲಂಗಾಣದ ಸಂಗಾರೆಡ್ಡಿ ಜಿಲೆಯಲ್ಲಿ ಪತ್ತೆಯಾಗಿದ್ದು ಕೊಲೆಯ ಭೀಕರತೆಗೆ ಸಾಕ್ಷಿಯಾಗಿದೆ.

ಕೆ. ರಾಜು (35) ಕೊಲೆಯಾದ ಉದ್ಯಮಿ, ಇವರ ಸಹೋದರ ಕೆ. ಗೋಪಾಲ್ ಎಂಬುವವರು ರಾಜು ಕಾಣೆಯಾಗಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.

ಅನೈತಿಕ ಸಂಬಂಧ ಕಾರಣವೆ ?

ಕೆ. ರಾಜು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಭಾರಿ ಹಣಗಳಿಸಿದ್ದರು. ಬಳಿಕ ಅವರು ನಾನಾ ಚಟಗಳಿಗೆ ದಾಸರಾಗಿದ್ದರು. ಕೊಲೆ ಮಾಡಿದ ಆರೋಪಿಗಳಲ್ಲಿ ಕೆಲವರ ಪತ್ನಿಯರೊಂದಿಗೆ ರಾಜು ಅನೈತಿಕ ಸಂಬಂಧ ಹೊಂದಿದ್ದರು. ಕೊಲೆಗೆ ಅನೈತಿಕ ಸಂಬಂಧವೇ ಕಾರಣವಾಗಿರುವ ಶಂಕೆ ಇದೆ. ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತಂಕಕಾರಿ ವಿಡಿಯೋ ಮೆಸೇಜ್ ಮಾಡುತ್ತಿದ್ದ 18 ವರ್ಷದ ಯುವತಿಯರ ಬಂಧನ

Home add -Advt

Related Articles

Back to top button