Latest

ಅನೈತಿಕ ಸಂಬಂಧ ಕಣ್ಣಾರೆ ನೋಡಿ ಆಘಾತ: ತಾಯಿಯ ಪ್ರಿಯಕರನನ್ನು ಇರಿದು ಕೊಂದ ಮಗ

ಪ್ರಗತಿ ವಾಹಿನಿ ಸುದ್ದಿ ಮುಂಬೈ – 

೨೦ ವರ್ಷದ ಯುವಕನೊಬ್ಬ ತನ್ನ ತಾಯಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಮುಂಬೈನ ಪೂವೈ ಪೊಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ನಡೆದಿದೆ. ಮನೀಷ್ ನಾಯ್ಕ (೨೦) ಕೊಲೆ ಮಾಡಿದ ಆರೋಪಿ ಯುವಕ. ರಾಜೇಶ್ ವೈದ್ಯ (೪೭) ಕೊಲೆಯಾದವನು.

ರಾಜೇಶ್ ಹೊಟೇಲ್ ಒಂದರಲ್ಲಿ ಹೌಸ್ ಕೀಪಿಂಗ್ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದು ಮನೀಷ್‌ನ ತಾಯಿ ರಾಜೇಶ್‌ನ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಇವರಿಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಗುರುವಾರ ರಾತ್ರಿ ಮನೀಷ್ ಮನೆಗೆ ಬಂದಾಗ ತನ್ನ ತಾಯಿ ಮತ್ತು ರಾಜೇಶ್ ವೈದ್ಯನ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡು ಆಘಾತಗೊಂಡಿದ್ದಾನೆ. ಕ್ರುದ್ಧನಾದ ಮನೀಷ್ ಅಡುಗೆ ಮನೆಯಲ್ಲಿದ್ದ ಹರಿತವಾದ ಚಾಕುವಿನಿಂದ ರಾಜೇಶನ ಹೊಟ್ಟೆ ಮತ್ತು ಬೆನ್ನಿಗೆ ಇರಿದಿದ್ದಾನೆ. ಬಳಿಕ ರಕ್ತ ಸೋರುತ್ತಿದ್ದ ರಾಜೇಶನ ದೇಹವನ್ನು ಮನೆಯಿಂದ ಎಳೆದು ಹೊರ ಹಾಕಿದ್ದಾನೆ. ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು ಪೊಲೀಸರು ರಾಜೇಶನ ಅಣ್ಣನಿಗೆ ವಿಷಯ ತಿಳಿಸಿದ್ದಾರೆ. ರಾಜೇಶ್‌ನ ಅಣ್ಣ ಧರಮ್‌ವೀರ್ ವೈದ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಮನೀಷ್ ನನ್ನು ಕೊಲೆ ಆರೋಪದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಮನೀಷ್‌ಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ರೇವ್ ಪಾರ್ಟಿ; ನಟಿ ನಿಹಾರಿಕಾ ಕೊನಿಡೆಲಾ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button