Kannada NewsKarnataka News

ಈಶ್ವರಪ್ಪ ಬಂಧಿಸುವವರೆಗೆ ಸಂತೋಷ ಪಾಟೀಲ ಅಂತ್ಯಕ್ರಿಯೆ ಮಾಡಲ್ಲ – ಸಹೋದರ ಪ್ರಶಾಂತ್ ಹೇಳಿಕೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಚಿವ ಈಶ್ವರಪ್ಪ ಬಂಧನವಾಗುವವರೆಗೆ ಸಂತೋಷ ಪಾಟೀಲ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಸಹೋದರ ಪ್ರಶಾಂತ ಪಾಟೀಲ ಹೇಳಿದ್ದಾರೆ.

ಸಂತೋಷ ಸಾವಿಗೆ ಸಚಿವ ಕೆ ಎಸ್ ಈಶ್ವರಪ್ಪ ನೇರ ಕಾರಣ. ಅವರ ಹಿಂಸೆಯಿಂದಲೇ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಶ್ವರಪ್ಪ ಜೀವ ಬೆದರಿಕೆ ಹಾಕಿದ್ದಲ್ಲದೆ ಪ್ರಕರಣವನ್ನೂ ದಾಖಲಿಸಿದ್ದರು. ಹಾಗಾಗಿ ಸಚಿವರ ಬಂಧನವಾಗಬೇಕು ಎಂದು ಆಗ್ರಹಿಸಿದರು.

ಸಚಿವ ಈಶ್ವರಪ್ಪಅವರನ್ನು ಅನೇಕ ಸಲ ಸಂತೋಷ ಪಾಟೀಲ್ ಭೇಟಿಯಾಗಿದ್ದರು. ಕೆಲಸ ಮಾಡಿಸಿದ್ದಲ್ಲದೆ ಬಿಲ್ ಪಾವತಿಸದೆ ಸತಾಯಿಸಿದ್ದರು. ಇನ್ನಿಲ್ಲದ ಹಿಂಸೆ ನೀಡಿದ್ದರು. ಬೆಳಗಾವಿಗೆ ಪಾರ್ಥಿವ ಶರೀರ ತರಲಾಗುವುದು.ಈಶ್ವರಪ್ಪ ಅರೆಸ್ಟ್ ಆಗೋವರಗೆ ಅಂತ್ಯಕ್ರಿಯೆ ಮಾಡಲ್ಲ  ಸಂತೋಷ ಪಾಟೀಲಗೆ ಒಂದು ವರ್ಷದ ಮಗು ಸಹ ಇದೆ ಎಂದರು.

ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಹೆಸರು ಬರೆದಿಟ್ಟು ಸಂತೋಷ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಬಿಜೆಪಿ ನಾಯಕರು ತಂಗಿರುವ ಹೋಟೆಲ್‌ಗೆ ಆಪ್ ಕಾರ್ಯಕರ್ತರ ಮುತ್ತಿಗೆ ಹಾಕಿ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟಸಿದರು.

ನಂತರ ಪೊಲೀಸರು ಆಪ್ ಕಾರ್ಯಕರ್ತರನ್ನು ಬಂಧಿಸಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಬಿಜೆಪಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ನಡೆಯುತ್ತಿದ್ದು,  ರಾಜು ಟೋಪಣ್ಣವರ್ ನೇತೃತ್ವದಲ್ಲಿ ಆಪ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೆಳಗಾವಿಯ ಗುತ್ತಿಗೆದಾರ ಉಡುಪಿಯಲ್ಲಿ ಆತ್ಮಹತ್ಯೆ

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button