Latest

ಯುವತಿ ಅಪ್ಪನಿಗೆ ವಿಷಯ ಹೇಳಿದ್ದಕ್ಕೆ ಆಸಿಡ್ ಹಾಕಿದೆ ಎಂದ ಆರೋಪಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿ ಯುವತಿ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಾಗೇಶ್ ನನ್ನು ತಮಿಳುನಾಡಿದ ತಿರುವಣ್ಣಾಮಲೈ ಆಶ್ರಮವೊಂದರಲ್ಲಿ ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆತಂದಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಯುವತಿಯ ಮೇಲೆ ಆಸಿಡ್ ದಾಳಿಗೆ ಕಾರಣವೇನು ಎಂಬುದನ್ನು ಬಾಯ್ಬಿಟ್ಟಿದ್ದಾನೆ. ಮೊದಲು ಆಸಿಡ್ ಹಾಕಬೇಕು ಎಂಬ ಉದ್ದೇಶ ಇರಲಿಲ್ಲ ಮದುವೆಯಾಗುವಂತೆ ಕೇಳಿದ್ದೆ. ಆದರೆ ಯುವತಿ ಒಪ್ಪುತ್ತಿರಲಿಲ್ಲ. ಘಟನೆ ಹಿಂದಿನ ದಿನ ಆಸಿಡ್ ಹಾಕ್ತೀನಿ ಎಂದು ಹೆದರಿಸಿದ್ದೆ. ಈ ವಿಚಾರವನ್ನು ಯುವತಿ ತನ್ನ ತಂದೆಗೆ ಹೇಳಿದ್ದಳು. ಆಕೆಯ ತಂದೆ ನನ್ನ ಅಣ್ಣನಿಗೆ ಹೇಳಿದ್ದಾರೆ. ಇದಕ್ಕೆ ಅಣ್ಣ ಆಸಿಡ್ ಹಾಕ್ತೀಯಾ ಎಂದು ನನ್ನನ್ನು ಬೈದಿದ್ದ. ಹಾಗಾಗಿ ಆಸಿಡ್ ಹಾಕಿಯೇಬಿಡೋಣ ಎಂದು ಆಸಿಡ್ ಎರಚಿದ್ದಾಗಿ ಹೇಳಿದ್ದಾನೆ ಎಂದು ತಿಳಿದಿಬಂದಿದೆ.

ಘಟನೆ ಬಳಿಕ ಕೋರ್ಟ್ ಬಳಿ ಹೋಗಿದ್ದೆ. ಅಲ್ಲಿ ಬೈಕ್ ಬಿಟ್ಟು ಆಟೋದಲ್ಲಿ ಹೊಕೋಟೆಯತ್ತ ತೆರಳಿದೆ. ಅಲ್ಲಿ ಒಂದು ಕೆರೆ ಕಂಡು ಆತ್ಮಹತ್ಯೆ ಮಾಡಿಕೊಳ್ಳೋಣವೆಂದು ಹೋದೆ. ಆದರೆ ಬೇಡ ಎನಿಸಿ ವಾಪಸ್ ಬಂದೆ. ತಿರುಪತಿಗೆ ಹೋಗಿ ಪ್ರಾಯಶ್ಚಿತ ಮಾಡಿಕೊಳ್ಳೋಣ ಎಂದು ಮಾಲೂರು ಬಸ್ ಹತ್ತಿದೆ. ಮಾರ್ಗ ಮಧ್ಯೆ ಅದೂ ಬೇಡ ಎನಿಸಿ ಬಸ್ ಇಳಿದು ಕೃಷ್ಣಗಿರಿ ಬಸ್ ಹತ್ತಿ ತಿರುವಣ್ಣಾಮಲೈಗೆ ಹೋಗಿದ್ದಾಗಿ ವಿವರಿಸಿದ್ದಾನೆ ಎಂದು ತಿಳಿದುಬಂದಿದೆ.
ಆಸಿಡ್ ದಾಳಿ ಆರೋಪಿ ಮೇಲೆ ಗುಂಡಿನ ದಾಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button