Latest

*ಸಿಎಂ ಸಿದ್ದರಾಮಯ್ಯ ಅವರನ್ನು ನೋಡಲು ಮನೆ ಮೇಲೆ ಹತ್ತಿದ ಯುವಕನಿಗೆ ಕರೆಂಟ್ ಶಾಕ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಗೆ ಸೋಮವಾರ ಆಗಮಿಸಿದ್ದ ಸಿಎಂ ಅವರನ್ನು ನೋಡಲು ಮನೆಯ ಮೇಲೆ ಹೋಗಿದ್ದ ಯುವಕನಿಗೆ ವಿದ್ಯುತ್ ಶಾಕ್ ತಗಲಿರುವ ಘಟನೆ ಕಾಗವಾಡ ತಾಲೂಕಿನ ಜುಗೂಳು ಗ್ರಾಮದಲ್ಲಿ ನಡೆದಿದೆ.‌

ಗೋಕಾಕ ತಾಲೂಕಿನ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಬಳಿಕ ಸಿಎಂ ಅವರು ಕಾಗವಾಡ ತಾಲೂಕಿಗೆ ತೆರಳಿದ್ದು ಅಲ್ಲಿ ಮಹೇಶ ಹುನ್ನರಗಿ (22) ಎಂಬ ಯುವಕ ಮನೆ ಮೇಲೆ ಹತ್ತಿದ್ದಾಗ ವಿದ್ಯುತ್ ಶಾಕ್ ತಗುಲಿದೆ.‌ ಯುವಕನನ್ನು ತಕ್ಷಣ ಮುಖ್ಯಮಂತ್ರಿ ಅವರ ಬೆಂಗಾವಲಿನಲ್ಲಿದ್ದ ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡ ಯುವಕ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.‌

Home add -Advt

Related Articles

Back to top button