Kannada NewsKarnataka NewsLatest

*ಮತ್ತೊಂದು ಭೀಕರ ಆಪಘಾತ: ಎರಡು ಬೈಕ್ ಗಳು ಡಿಕ್ಕಿಯಾಗಿ ಮೂವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಹಬ್ಬದ ಸಂದರ್ಭದಲ್ಲಿಯೇ ಸಾಲು ಸಾಲು ಅಪಘಾತ ಪ್ರಕರಣ ನಡೆದಿದೆ. ಎರಡು ಬೈಕ್ ಗಳ ನಡಿವೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಾಯಿ ಡಾಬಾ ಬಳಿ ಈ ಘಟನೆ ನಡೆದಿದೆ. ಹೋಂಡಾ ಆಕ್ಟೀವಾ ಹಾಗೂ ಇನ್ನೊಂದು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಹೋಂಡಾ ಆಕ್ಟೀವಾದಲ್ಲಿದ್ದ ಇಬ್ಬರು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Home add -Advt

ಅಪಘಾತದಲ್ಲಿ ಮುತ್ತುರಾಜ್ (36), ವೆಂಕಟಧನಶೆಟ್ಟಿ (64) ಹಾಗೂ ವಿಷ್ಣು (28) ಮೃತ ದುರ್ವೈವಿಗಳು. ಶಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button