Belagavi NewsBelgaum NewsKannada NewsKarnataka News

*ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ಆರೋಪಿತನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ವಿವಿಧ  ಠಾಣೆಗಳಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಒಟ್ಟು 5,02,,000 ಬೆಲೆಯ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಲಾಗಿದೆ.  

ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಗ್ ಉಪ- ಪೊಲೀಸ್ ಆಯುಕ್ತರು (ಅ&ಸಂ) ಸ್ನೇಹ ಪಿ ವಿ ಮತ್ತು ಖಡೇಬಜಾರ್ ಉಪ- ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಹೆಚ್ ಶೇಖರಪ್ಪ ಮಾರ್ಗದರ್ಶನದಲ್ಲಿ ತಿಲಕವಾಡಿ  ಪೊಲೀಸ್ ಠಾಣೆಯ ಇನ್ಸಪೆಕ್ಟರ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ಜಲೈ 10 ರಂದು ಆರೋಪಿ ವಿಠ್ಠಲ್ ಪಕೀರಪ್ಪ   ಇವನಿಗೆ ತಿಲಕವಾಡಿ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 77/2024 ಕಲಂ 305  BNS ನೇದ್ದರಲ್ಲಿ ದಸ್ತಗಿರಿ ಮಾಡಲಾಗಿದೆ.

ಆರೋಪಿ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ ಬಂಗಾರದ ಆಭರಣಗಳನ್ನು ಮುತ್ತೂಟ್  ಪೈನಾನ್ಸ್ ಶಾಖೆಯಲ್ಲಿ ಅಡವಿಟ್ಟಿರುವ 4,80,000 ಬೆಲೆಯ 80 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಗುನ್ನೆಗೆ ಬಳಸಿದ 20000 ಬೆಲೆಯ ಹಿರೋ ಹೋಂಡಾ ಹೆಚ್ ಎಫ್ ಡೀಲಕ್ಸ್  ಮೋಟಾರ ಸೈಕಲ್‌ನ್ನು ಸೇರಿ ಒಟ್ಟು 5,02,000 ಬೆಲೆಯ ಸ್ವತ್ತನ್ನು ಜುಲೈ 10 ರಂದು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. 

ಸದರಿ ತನಿಖಾತಂಡದಲ್ಲಿ ತಿಲಕವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ರವರಾದ ಪರಶುರಾಮ್ ಪೂಜೇರಿ, ಪಿ.ಎಸ್.ಐ ಸಂತೋಷ್ ದಳವಾಯಿ, ಸಿ ಎಚ್ ಸಿ ಗಳಾದ ಮಹೇಶ್ ಪಾಟೀಲ್, ಸೋಮಲಿಂಗ ಕರ್ಲಿಂಗನವರ್, ಸಿಪಿಸಿಗಳಾದ ಸಂಜು ಸಂಗೋಟಿ ಮಲ್ಲಿಕಾರ್ಜುನ್ ಪಾತ್ರೋಟ್ , ಲಾಡ್ಜಿಸಾಬ್ ಮುಲ್ತಾನಿ, ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ರಮೇಶ್ ಅಕ್ಕಿ, ಮಹದೇವ್ ಕಾಶಿದ್ ರವರ   ಕಾರ್ಯವೈಖರಿಯನ್ನು ಬೆಳಗಾವಿ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button