Latest

ವೃದ್ಧನನ್ನು ಹನಿ ಟ್ರ್ಯಾಪ್ ಗೆ ಕೆಡವಿದ ಚಾಲಾಕಿ ಮಹಿಳೆ ಬಂಧನ

ಪ್ರಗತಿ ವಾಹಿನಿ ಸುದ್ದಿ; ದಾವಣಗೆರೆ: ಕೊಟ್ಟ ಹಣವನ್ನು ಮರಳಿ ಕೇಳಿದ ವೃದ್ಧನಿಗೆ ಮತ್ತು ಬರುವ ಔಷಧ ನೀಡಿ, ಬೆತ್ತಲಾಗಿಸಿ ತನ್ನ ಜತೆ ಮಲಗಿದಂತೆ ಫೋಟೊ ಕ್ಲಿಕ್ಕಿಸಿ, 15 ಲಕ್ಷ ಕೊಡುವಂತೆ ಬ್ಲ್ಯಾಂಕ್ ಮೇಲ್ ಮಾಡುತ್ತಿದ್ದ ದಾವಣಗೆರೆಯ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯ ಸರಸ್ವತಿ ನಗರದ ಯಶೋಧ (32) ಆರೋಪಿ ಮಹಿಳೆ. ಸರಸ್ವತಿ ನಗರಕ್ಕೆ ಹೊಂದಿಕೊಂಡಿರುವ ಶಿವಕುಮಾರಸ್ವಾಮಿ ಬಡವಣೆಯ ನಿವಾಸಿ ಚಿದಾನಂದಪ್ಪ (79) ಹನಿ ಟ್ರ್ಯಾಪ್‌ಗೆ ಒಳಗಾದ ವೃದ್ಧ.

ಚಿದಾನಂದಪ್ಪ ಮತ್ತು ಯಶೋಧ ನಡುವೆ ಪರಿಚಯವಾಗಿ ಸ್ನೇಹ ಬೆಳೆದಿದ್ದು, ಚಿದಾನಂದಪ್ಪ ಕೆಲವೊಮ್ಮೆ ಯಶೋಧಾ ಮನೆಗೆ ಬರುತ್ತಿದ್ದರು. ಈ ವೇಳೆ ಯೋಶೋಧಾ ಟಿ, ಕಾಫಿ, ಜ್ಯೂಸ್ ಕೊಡುತ್ತಿದ್ದಳು.

ಇದೇ ಸಲುಗೆಯನ್ನು ಬಳಸಿಕೊಂಡು ಚಿದಾನಂದಪ್ಪ ಅವರ ಬಳಿ ಯಶೋಧಾ ಆಗ ೫ ಸಾವಿರ, ಈಗ 10 ಸಾವಿರ ಅಂತ ಒಟ್ಟು 86 ಸಾವಿರ ಸಾಲ ಪಡೆದಿದ್ದಳು.

Home add -Advt

ಕೊಟ್ಟ ಹಣವನ್ನು ಚಿದಾನಂದಪ್ಪ ಮರಳಿ ಕೇಳುತ್ತಿದ್ದರು. ಈ ಸಂದರ್ಭದಲ್ಲಿ ಹೀಗೆ ಒಮ್ಮೆ ಚಿದಾನಂದಪ್ಪ ಯಶೋಧಾ ಮನೆಗೆ ಬಂದಾಗ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಚಿದಾನಂದಪ್ಪಗೆ ಕೊಟ್ಟಿದ್ದಾಳೆ.

ಜ್ಯೂಸ್ ಸೇವಿಸಿದ ಚಿದಾನಂದಪ್ಪ ಪ್ರಜ್ಞೆ ತಪ್ಪಿದ ಬಳಿಕ ಬೆತ್ತಲು ಮಾಡಿ ತನ್ನ ಜತೆ ಮಲಗಿದ ರೀತಿಯಲ್ಲಿ ಫೋಟೊ ತೆಗೆದುಕೊಂಡಿದ್ದಾಳೆ. ಎಚ್ಚರಾದಾಗ ಭಯಗೊಂಡ ಚಿದಾನಂದಪ್ಪ ಬಟ್ಟೆ ಧರಿಸಿ ಮನೆಗೆ ಬಂದಿದ್ದಾರೆ.

ಇದಾದ ಎರಡೇ ದಿನಕ್ಕೆ ಆಂಟಿ 15 ಲಕ್ಷಕ್ಕೆ ಬ್ಲ್ಯಾಕ್ ಮೇಲ್ ಮಡತೊಡಗಿದ್ದಾಳೆ.

ಈ ವಿಷಯವನ್ನು ಚಿದಾನಂದಪ್ಪ ತನ್ನ ಪುತ್ರನ ಬಳಿ ಹೇಳಿಕೊಂಡಿದ್ದು, ಪೊಲೀಸರಿಗೆ ವಿಷಯ ತಲುಪಿದೆ. ಕೆಟಿಜೆ ನಗರ ಠಾಣೆಯ ಪೊಲೀಸರು ಯಶೋಧಾಳನ್ನು ಬಂಧಿಸಿದ್ದಾರೆ.

ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

https://pragati.taskdun.com/latest/actor-lohitashwano-moreheart-attacksandalwood/

Related Articles

Back to top button