Film & EntertainmentKannada NewsNational

*ಕೊನೆಗೂ ಭಾರತೀಯ ನಾಗರಿಕನಾದ ನಟ ಅಕ್ಷಯ್ ಕುಮಾರ್*

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನ ಬಹುಬೇಡಿಕೆಯ ನಟ ಅಕ್ಷಯ್ ಕುಮಾರ್ ಕೊನೆಗೂ ಭಾರತೀಯ ನಾಗರಿಕರಾಗಿದ್ದಾರೆ. ಕೆನಾಡಾ ಪೌರತ್ವ ಬಿಟ್ಟು ಭಾರತೀಯ ಪೌರತ್ವ ಪಡೆದುಕೊಂಡಿರುವುದಾಗಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ದಿನ ಸಂತಸ ಹಂಚಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಭಾರತದಲ್ಲಿಯೇ ಇದ್ದು, ಬಾಲಿವುಡ್ ನಲ್ಲಿ ಬೇಡಿಕೆ ನಟನಾಗಿ ಮಿಂಚಿರುವ ಅಕ್ಷಯ್ ಕುಮಾರ್ ಗೆ ಭರತೀಯ ಪೌರತ್ವ ಸಿಕ್ಕಿರಲಿಲ್ಲ. ಇದೀಗ ತಾನು ಭಾರತೀಯ ಪೌರತ್ವ ಪಡೆದುಕೊಂಡಿರುವುದಾಗಿ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.’ಹೃದಯ ಹಾಗೂ ಪೌರತ್ವ ಎರಡೂ ಭಾರತದ್ದೇ’ ಎಂದು ಟ್ವೀಟ್ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಕೆನಡಾ ಪೌರತ್ವ ಹೊಂದಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಹಲವರು ಅವರನ್ನು ಟೀಕಿಸಿದ್ದರು, ಭಾರತ ಬಿಟ್ಟು ಕೆನಡಾಗೆ ತೆರಳುವಂತೆ ಹೇಳಿದ್ದರು. ಇದರಿಂದ ನೊಂದಿದ್ದ ಅಕ್ಷಯ್ ಕುಮಾರ್ 2019ರಲ್ಲಿ ಭರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಪೌರತ್ವ ಪ್ರಕ್ರಿಯೆ ವಿಳಂಬವಾಯಿತು.

Home add -Advt

ಇದೀಗ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಭಾರತೀಯ ಪೌರತ್ವ ಸಿಕ್ಕಿದ್ದು ಹೃದಯ ಹಾಗೂ ಪೌರತ್ವ ಎರಡೂ ಭಾರತದ್ದೇ. ಸ್ವಾತಂತ್ರ್ಯ ದಿನದ ಶುಭಾಷಯಗಳು ಎಂದು ಅಕ್ಷಯ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಅಕ್ಷಯ್ ಕುಮಾರ್ ಕೆನಡಾದ ನಾಗರಿಕತ್ವ ಪಡೆದಿದ್ದಕ್ಕೆ ಕಾರಣವೇನು ಎಂಬುದನ್ನು ಈ ಹಿಂದೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಸಾಲು ಸಾಲು ಸಿನಿಮಾಗಳು ಸೋತಿದ್ದರಿಂದ ನನಗೆ ಭಾರತದಲ್ಲಿ ಉಳಿಗಾಲವೇ ಇಲ್ಲ ಎಂದು ಭಾವಿಸಿದ್ದೆ. ಕೆನಡಾದಲ್ಲಿ ನನ್ನ ಗೆಳೆಯ ಇದ್ದ. ಆತ ಅಲ್ಲಿಗೆ ಬಂದು ಕೆಲಸ ಮಾಡುವಂತೆ ಹೇಳಿದ್ದ. ಅದರಂತೆ ಕೆನಡಾ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿ ಅಲ್ಲಿನ ಪೌರತ್ವ ಪಡೆದುಕೊಂಡಿದ್ದೆ. ಅಷ್ಟೊತ್ತಿಗೆ ನನ್ನ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿತ್ತು. ಅಲ್ಲದೇ ಸೂಪರ್ ಹಿಟ್ ಕೂಡ ಆಯಿತು. ಆನಂತರ ನಾನು ಕೆನಡಾ ಪೌರತ್ವ ಪಡೆದುಕೊಂಡಿದ್ದನ್ನೇ ಮರೆತು ಬಿಟ್ಟಿದ್ದೆ ಎಂದು ತಿಳಿಸಿದ್ದರು.

Related Articles

Back to top button