Latest

ರಾಜ್ಯಪಾಲರ ಭೇಟಿಗೆ ತೆರಳಿರುವ ಆನಂದ ಸಿಂಗ್

ಪ್ರಗತಿವಾಹಿನಿ ಸುದ್ದಿ, ಬೆೆಂಗಳೂರು:

ವಿಜಯನಗರ ಶಾಸಕ ಆನಂದ ಸಿಂಗ್ ರಾಜಿನಾಮೆ ಕುರಿತು ಗೊಂದಲ ಮುಂದುವರಿಯುತ್ತಿರುವಂತೆಯೇ ಅವರು ರಾಜ್ಯಪಾಲರ ಭೇಟಿಗಾಗಿ ರಾಜಭವನದತ್ತ ತೆರಳಿದ್ದಾರೆ.

ಆನಂದ ಸಿಂಗ್ ಶಾಸಕಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಇಂದು ಬೆಳಗ್ಗೆಯಿಂದಲೇ ಹರಡಿದ್ದು, ಅದನ್ನು ಯಾರೂ ಖಚಿತಪಡಿಸಿಲ್ಲ. ಸ್ಪೀಕರ್ ರಮೇಶ ಕುಮಾರ ಕೂಡ ಈ ಬಗ್ಗೆ ಅಡ್ಡ ಗೋಡೆಯ ಮೇಲೆ ಗೋಡೆ ಇಟ್ಟಂತೆ ಮಾತನಾಡಿದ್ದಾರೆ. ಆನಂದ ಸಿಂಗ್ ಕೂಡ ಯಾರಿಗೂ ಸಿಗುತ್ತಿಲ್ಲ.

ಈ ಮಧ್ಯೆ ಆನಂದ ಸಿಂಗ್ ಇದೀಗ ರಾಜ್ಯಪಾಲರ ಭೇಟಿಗೆ ಹೊರಟಿದ್ದಾರೆ. ಜಿಂದಾಲ ಕಂಪನಿಗೆ ಭೂಮಿ ನೀಡುವ ವಿಷಯವಾಗಿ ಅಸಮಾಧಾನಗೊಂಡಿದ್ದೇ ಆನಂದ ಸಿಂಗ್ ರಾಜಿನಾಮೆಗೆ ಕಾರಣ ಎನ್ನಲಾಗುತ್ತಿದೆ.

Home add -Advt

ಈ ಕುರಿತು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹ ಮಾತನಾಡಿದ್ದು, ಆನಂದ ಸಿಂಗ್ ರಾಜಿನಾಮೆ ವಿಚಾರ ತಮಗೆ ಗೊತ್ತಿಲ್ಲ. ಆದರೆ ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಗೊಂದಲವಂತೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದಿದ್ದಾರೆ.

ಈ ಮಧ್ಯೆ ಅಮೇರಿಕಾದಿಂದ ಟ್ವೀಟ್ ಮಾಡಿರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಬಿಜೆಪಿ ಸರಕಾರದಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದೆ. ಅಧಿಕಾರಕ್ಕೆ ಬರುವುದು ಬಿಜೆಪಿಯ ಹಗಲುಗನಸು ಎಂದಿದ್ದಾರೆ.

Related Articles

Back to top button