Latest

ಈ ಸಿಡಿ ಪ್ರಕರಣ ಬೆಂಗಳೂರಿಗೆ ಸೀಮಿತವಾಗಿದೆ, ಹಾಗಾಗಿ ಇಲ್ಲೇ ದೂರು ದಾಖಲಿಸಿದ್ದೇನೆ – ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಿಡಿ ಪ್ರಕರಣಕ್ಕೆ ಸಬಂಧಿಸಿದಂತೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ, ವಕೀಲರ ಸಲಹೆಯ ಮೇರೆಗೆ ದೂರಿನಲ್ಲಿ ಯಾರದ್ದೂ ಹೆಸರು ಉಲ್ಲೇಖಿಸಿಲ್ಲ ಎಂದು ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಕೊನೆಯ ತನಕವೂ ಬಿಡುವುದಿಲ್ಲ.  ವಕೀಲರ ಸಲಹೆಯಂತೆ ದೂರು ದಾಖಲು ಮಾಡಿದ್ದೇನೆ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಆದರೆ ದೂರಿನಲ್ಲಿ ವಕೀಲರ ಸಲಹೆಯ ಮೇರೆಗೆ ಯಾವುದೇ ಹೆಸರನ್ನು ಹಾಕಿಲ್ಲ ಎಂದರು.

ಬೆಳಗಾವಿಯಲ್ಲೂ ದೂರು ದಾಖಲಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣ ಬೆಂಗಳೂರಿಗೆ ಸೀಮಿತವಾಗಿದೆ. ಹಾಗಾಗಿ ಬೆಳಗಾವಿಯಲ್ಲಿ ದೂರು ದಾಖಲಿಸುವ ಬಗ್ಗೆ ಯೋಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಿಡಿ ಪ್ರಕರಣಕ್ಕಾಗಿ ನೂರಾರು ಕೋಟಿ ರೂ. ಖರ್ಚು ಮಾಡಲಾಗಿದೆ. ಈಗಾಗಲೆ ಎಸ್ಐಟಿ ವಶಕ್ಕೆ ಪಡೆದಿರುವವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದೂ ಅವರು ಹೇಳಿದರು.

Home add -Advt

ಸದಾಶಿವನಗರದಲ್ಲಿ ಷಢ್ಯಂತ್ರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಅವರು, 3 ತಿಂಗಳಿನಿಂದ ಬ್ಲ್ಯಾಕ್ ಮೇಲೆ ಮಾಡುವ ಯತ್ನ ನಡೆದಿತ್ತು ಎಂದು ದೂರಿದ್ದಾರೆ. ಈ ಮೊದಲು ಅವರು ಯಶವಂತಪುರ ಮತ್ತು ಓರಿಯನ್ ಮಾಲ್ ಬಳಿ ಷಢ್ಯಂತ್ರ ನಡೆದಿದೆ ಎಂದು ಅವರು ಹೇಳಿದ್ದರು.

ಈ ಸಂಬಂಧ ಎಫ್ಐಆರ್ ದಾಖಲಾಗಿದೆ.

ರಾಸಲೀಲೆ ಸಿಡಿ ಪ್ರಕರಣ; ಆಪ್ತನ ಮೂಲಕ ದೂರು ದಾಖಲಿಸಿದ ರಮೇಶ್ ಜಾರಕಿಹೊಳಿ

Related Articles

Back to top button