
ಪ್ರಗತಿವಾಹಿನಿ ಸುದ್ದಿ: ಗೋವಾದಲ್ಲಿ ಕರ್ನಾಟಕದ ವಾಹನಗಳಿಗೆ ಇಲ್ಲ ಸಲ್ಲದ ಕಾರಣಗಳಿಗೆ ದಂಡ ಹಾಕುತ್ತಿದ್ದ ಪೊಲೀಸರಿಗೆ ತಕ್ಕ ಪಾಠ ಕಲಿಸಿ, ಗೋವಾ ಸಿಎಂ ಅವರಿಂದ ಕರ್ನಾಟಕ ವಾಹನಗಳಿಗೆ ತೊಂದರೆ ಕೊಡದಂತೆ ವಿಶೇಷ ಆದೇಶ ಹೊರಡಿಸುವಂತೆ ಮಾಡಿದ ಮಾಜಿ ಶಾಸಕ ಅನಿಲ್ ಬೆನಕೆ ಅವರಿಗೆ ಇಂದು ಸನ್ಮಾನಿಸಲಾಯಿತು.
ಈ ವೇಳೆ ಕರವೇ(ಪ್ರವೀಣ್ ಶೆಟ್ಟಿ ಬಣ) ದ ಜಿಲ್ಲಾಧ್ಯಕ್ಷರಾದ ಆರ್ ಅಭಿಲಾಷ್, ಕರವೇ( ನಾರಾಯಣ ಗೌಡ ಬಣ) ದ ಅಧ್ಯಕ್ಷರಾದ ದೀಪಕ್ ಗುಡಗನಟ್ಟಿ, ಕರವೇ ಮುಖಂಡರಾದ ಬಾಳಸಾಹೇಬ್ ಉದಗಟ್ಟಿ, ಅರುಣ್ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.