ಅನ್ನ ಭಾಗ್ಯ, ಯುವನಿಧಿ ಗ್ಯಾರಂಟಿ ಆದೇಶ : ಯಾವ ಯಾವ ಷರತ್ತು ಹಾಕಲಾಗಿದೆ ಗೊತ್ತೇ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾಂಗ್ರೆಸ್ ಸರಕಾರ ಘೋಷಿಸಿರುವ 5 ಗ್ಯಾರಂಟಿಗಳ ಪೈಕಿ ಅನ್ನ ಭಾಗ್ಯ ಮತ್ತು ಯುವನಿಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಸರಕಾರ ಆದೇಶ ಹೊರಡಿಸಿದೆ. ಈ ಯೋಜನೆಗಳ ಲಾಭ ಪಡೆಯಲು ಬೇಕಾದ ಅರ್ಹತೆ ಮತ್ತು ವಿಧಿಸಲಾಗಿರುವ ಷರತ್ತು ಗಳನ್ನು ಉಲ್ಲೇಖಿಸಿ ಆದೇಶ ಹೊರಡಿಸಲಾಗಿದೆ.

Home add -Advt

ಜುಲೈ 1ರಿಂದ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ಸಿಗಲಿದೆ. ಅಂತ್ಯೋದಯ, ಹಾಗೂ ಆದ್ಯತಾ ಪಡಿತರ ಚೀಟಿಗಳಿಗೆ ಈ ಯೋಜನೆ ಸೌಲಭ್ಯ ಸಿಗಲಿದೆ.

ಯುವನಿಧಿ ಲಾಭ ಪಡೆಯಲು ಪದವಿ ಅಥವಾ ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಸಿಗದ ಕನ್ನಡಿಗರು ಅರ್ಹರು.

2 ವರ್ಷಗಳ ವರೆಗೆ ಈ ಯೋಜನೆ ಸಿಗಲಿದ್ದು, ಅಷ್ಟರೊಳಗೆ ಸರಕಾರಿ ಅಥವಾ ಖಾಸಗಿ ಉದ್ಯೋಗ ದೊರೆತರೆ ಯೋಜನೆ ಸೌಲಭ್ಯ ರದ್ದಾಗಲಿದೆ.

ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.

ಉದ್ಯೋಗ ಸಿಕ್ಕಿದರೂ ಮಾಹಿತಿ ನೀಡದಿದ್ದಲ್ಲಿ ದಂಡ ವಿಧಿಸಲಾಗುತ್ತದೆ.

ಉನ್ನತ ವ್ಯಾಸಂಗಕ್ಕೆ ಸೇರಿದರೆ, ಶಿಶಿಕ್ಷು ವೇತನ ಪಡೆಯುತ್ತಿದ್ದರೆ. ಸರಕಾರಿ ಅಥವಾ ಖಾಸಗಿ ಉದ್ಯೋಗ ಮಾಡುತ್ತಿದ್ದರೆ. ವಿವಿಧ ಯೋಜನೆಯಡಿ ಬ್ಯಾಂಕ್ ಸಾಲಪಡೆದು ಸ್ವಯಂ ಉದ್ಯೋಗ ಮಾಡುತ್ತಿದ್ದರೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ.

 

https://mail.google.com/mail/u/0?ui=2&ik=8ea932610f&attid=0.1&permmsgid=msg-a:r-4845280590741173163&th=1888230086081f06&view=att&disp=inline&realattid=188822fda26631edeba1

https://mail.google.com/mail/u/0?ui=2&ik=8ea932610f&attid=0.2&permmsgid=msg-a:r-4845280590741173163&th=1888230086081f06&view=att&disp=inline&realattid=188822fedf163160d8f2

 

ಆಕಸ್ಮಿಕ ನಿಧನರಾದ ಯೋಧನ ಅಂತ್ಯಕ್ರಿಯೆ: ಬಿಕ್ಕಿ ಬಿಕ್ಕಿ ಅತ್ತ ಕುಟುಂಬಸ್ಥರು

https://pragati.taskdun.com/final-rite-of-a-soldier-who-died-accidentally/

Related Articles

Back to top button