Kannada NewsKarnataka NewsLatest
ರಾಜ್ಯ ಸಹ ಸಂಚಾಲಕಿಯಾಗಿ ಅನುಶ್ರೀ ದೇಶಪಾಂಡೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಮಹಿಳಾ ವಿಭಾಗದ ರಾಜ್ಯ ಸಹಸಂಚಾಲಕಿಯಾಗಿ ಬೆಳಗಾವಿಯ ಅನುಶ್ರೀ ದೇಶಪಾಂಡೆ ನೇಮಕವಾಗಿದ್ದಾರೆ.
ರಾಜ್ಯ ಅಧ್ಯಕ್ಷ ಅಶೋಕ ಹಾರ್ನಳ್ಳಿ ನೇಮಕಾತಿಪತ್ರ ನೀಡಿದ್ದು, ಈಚೆಗೆ ನಡೆದ ರಾಜ್ಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.
ರಾಜ್ಯಾದ್ಯಂತ ಬ್ರಾಹ್ಮಣ ಮಹಿಳಾ ವಿಭಾಗದಲ್ಲಿ ಸಂಘಟನಾತ್ಮಕ ಕೆಲಸ ನಿರ್ವಹಿಸುವ ಜವಾಬ್ದಾರಿಯನ್ನು ಅನುಶ್ರೀ ದೇಶಪಾಂಡೆ ಅವರು ನಿರ್ವಹಿಸಬೇಕಿದೆ. ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಾಗಿ ಅವರು ಈ ಹಿಂದೆ ಕೆಲಸ ನಿರ್ವಹಿಸಿದ್ದರು.
https://pragati.taskdun.com/latest/a-patient-woman-of-earth-weight-is-a-powerful-force-lakshmi-hebbalkar/




