Belagavi NewsBelgaum NewsKannada NewsKarnataka NewsLatest

ಬೆಳಗಾವಿಯಲ್ಲಿ ಕುಖ್ಯಾತ ರೌಡಿ ಬಂಧನ; ಬೆಳಗಾವಿಯಲ್ಲಿ ಮೊದಲ ಗೂಂಡಾ ಕಾಯ್ದೆ ಜಾರಿ ; ಇನ್ನೂ 3 -4 ಜನರು ಕ್ಯೂದಲ್ಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ಮತ್ತು ಪಕ್ಕದ ಮಹಾರಾಷ್ಟ್ರ & ಗೋವಾ ರಾಜ್ಯದಲ್ಲಿ ಅನೇಕ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸ್‌ರಿಂದ ತಲೆಮರೆಸಿಕೊಂಡು ತಿರುಗುತ್ತಿದ್ದು, ರೌಡಿ ವಿಶಾಲ ಸಿಂಗ್ ಚವ್ಹಾನ್ (25) (ಸಾ॥ ಚಿಕ್ಕನಂದಿಹಳ್ಳಿ ತಾ।। ಕಿತ್ತೂರ ಸದ್ಯ ಕದಮ ಬಿಲ್ಡಿಂಗ್ ಶಾಸ್ತ್ರಿ ನಗರ, ಬೆಳಗಾವಿ) ಈತನನ್ನು ಪತ್ತೆ ಮಾಡಿ, ಬಂಧಿಸಿ ಆತನ ವಿರುದ್ಧ ಗೂಂಡಾ ಆಕ್ಟ್ ಜಾರಿಗೊಳಿಸಲಾಗಿದೆ.

ರೌಡಿ ವಿಶಾಲ ಸಿಂಗ್ ಈತನ ವಿರುದ್ಧ- ಕೊಲೆ ಪ್ರಕರಣ-1, ಕೊಲೆಗೆ ಯತ್ನ ಪ್ರಕರಣಗಳು -5, ಆಯುಧ ಕಾಯ್ದೆ ಪ್ರಕರಣ -1, ಹಣಕ್ಕಾಗಿ ಅಪಹರಣ ಪ್ರಕರಣ-1, ಸುಲಿಗೆ ಪ್ರಕರಣ-1, ಗಡಿಪಾರು ಆದೇಶ ಉಲ್ಲಂಘನೆ & ಮುಂಜಾಗೃತಾ ಕ್ರಮ-2, ಮಹಾರಾಷ್ಟ್ರ ರಾಜ್ಯದಲ್ಲಿ ಕೊಲೆಗೆ ಯತ್ನ & ಆಯುಧ ಕಾಯ್ದೆ ಪ್ರಕರಣ -2, ಗೋವಾ ರಾಜ್ಯದಲ್ಲಿ ಕಳ್ಳತನ ಪ್ರಕರಣ-1 ಹೀಗೆ ಒಟ್ಟು-14 ಪ್ರಕರಣಗಳು ದಾಖಲಾಗಿವೆ.

ಅಲ್ಲದೇ ಆತನ ವಿರುದ್ಧ ಹೊರಡಿಸಿದ ಗಡಿಪಾರು ಆದೇಶವನ್ನು ಲೆಕ್ಕಿಸದೇ ಬೆಳಗಾವಿ ನಗರದಲ್ಲಿ ಮತ್ತೆ ಪ್ರವೇಶಿಸಿ ತಿಲಕವಾಡಿ ಠಾಣಾ ವ್ಯಾಪ್ತಿಯಲ್ಲಿ ಹಣಕ್ಕಾಗಿ ಅಪಹರಣ ಮಾಡಿದ್ದು, ಆ ಬಗ್ಗೆ ಆತನ ವಿರುದ್ಧ ತಿಲಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಮುಂಜಾಗೃತಾ ಕ್ರಮದಲ್ಲಿಯಲ್ಲಿಯೂ ಸಹ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅಪರಾಧಗಳನ್ನು ಮಾಡಿ ತಲೆ ಮರೆಸಿಕೊಂಡಿದ್ದನು. ಹೀಗೆ ಎಲ್ಲ 14 ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ಮತ್ತು ಗಡಿಪಾರು ಆದೇಶವನ್ನು ಲೆಕ್ಕಿಸದೇ ತನ್ನ ರೌಡಿ ವರ್ತನೆಯಿಂದ ಶಾಂತಿ ಕದಡಲು ಯತ್ನಿಸಿದ ವಿಶಾಲ ಸಿಂಗ್ ವಿರುದ್ಧ ಮಾನ್ಯ ನ್ಯಾಯಾಲಯಗಳಿಂದಲೂ 03 ಆರೆಸ್ಟ್ ವಾರಂಟ್ ಸಹ ಬಾಕಿ ಇದ್ದವು.

ಬೆಳಗಾವಿ ನಗರದಲ್ಲಿ ಮತ್ತು ಪಕ್ಕದ ರಾಜ್ಯಗಳಲ್ಲಿ ಅಪರಾಧಿಕ ಕೃತ್ಯಗಳನ್ನು ಮಾಡಿ ಮೂರೂ ರಾಜ್ಯಗಳ ಪೊಲೀಸ್‌ರ ಕೈಗೆ ಸಿಗದೇ ಹಾಗೂ ತನ್ನ ವ್ಯವಹಾರಗಳಿಗೆ ಕೇವಲ ವಾಟ್ಸ ಆ್ಯಪ್, ಇನ್‌ಸ್ಟಾಗ್ರಾಂ ನಂತಹ ಇತರೆ ಆ್ಯಪ್‌ಗಳನ್ನು ಬಳಸಿ ತಲೆಮರಿಸಿಕೊಂಡು ತಿರುಗುತ್ತಿದ್ದ ಆತನ ಬಂಧನಕ್ಕಾಗಿ ರೋಹನ ಜಗಧೀಶ ಐಪಿಎಸ್, ಡಿಸಿಪಿ (ಕಾ&ಸು) ರವರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತಂಡದ ಸದಸ್ಯರಾದ ಕಿರಣ ಹೊನಕಟ್ಟಿ ಪಿಎಸ್‌ಐ ಉದ್ಯಮಭಾಗ ಆತನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಇದೆಲ್ಲವನ್ನು ಪರಿಗಣಿಸಿ ಪೊಲೀಸ್ ಆಯುಕ್ತರು ನೀಡಿದ ಸೂಚನೆಯಂತೆ ಪಿಐ ಖಡೇಬಜಾರ “ಗೂಂಡಾ ಕಾಯ್ದೆ” ಅಡಿಯಲ್ಲಿ ಕ್ರಮಕ್ಕಾಗಿ ಪ್ರಸ್ತಾವನೆ ತಯಾರಿಸಿದ್ದು, ಎಸಿಪಿ ಪರಿಶೀಲಿಸಿ ರೋಹನ ಜಗಧೀಶ ಮಾರ್ಗದರ್ಶನದಲ್ಲಿ ಪೊಲೀಸ್ ಆಯುಕ್ತರಿಗೆ ಮಂಡಿಸಲಾಗಿತ್ತು. ಅದನ್ನು ಪರಿಗಣಿಸಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ದಿನಾಂಕ 30/04/2024 ರಂದು ಆದೇಶ ಹೊರಡಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದರು.

ರೋಹನ ಜಗದೀಶ ಐಪಿಎಸ್, ಡಿಸಿಪಿ (ಕಾ&ಸು), ಬೆಳಗಾವಿ ನಗರ ರವರು ಆತನ ವಿರುದ್ದದ ಎಲ್ಲ ಪ್ರಕರಣಗಳ ಸ್ವರೂಪ, ಅದರ ಗಂಭೀರತೆ ಹಾಗೂ ಸಮಾಜದಲ್ಲಿ ಇಂತಹ ರೌಡಿ ಚಟುವಟಿಕೆಗಳಿಂದಾಗುತ್ತಿರುವ ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಅಪರಾಧಿಕ ಮನಸ್ಥಿತಿಯ ಬಗ್ಗೆ ದಿನಾಂಕ.29/05/2024 ರಂದು ಉಚ್ಚ ನ್ಯಾಯಾಲಯ, ಬೆಂಗಳೂರಿನಲ್ಲಿ 03 ನ್ಯಾಯಾಧೀಶರ ಅಡ್ವೈಜರಿ ಬೋರ್ಡನಲ್ಲಿ ಗೂಂಡಾ ಕಾಯ್ದೆ ಜಾರಿಯ ಅವಶ್ಯಕತೆಯ ಕುರಿತು ಅಚ್ಚುಕಟ್ಟಾಗಿ ಮಂಡಿಸಿ, ನ್ಯಾಯಾಲಯದಿಂದಲೂ ಈ ಆದೇಶವನ್ನು ಧೃಡಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇದು ಪೊಲೀಸ್ ಕಮೀಷನರೇಟ್ ಬೆಳಗಾವಿ ನಗರದಲ್ಲಿಯೇ ಮೊದಲ ಪ್ರಕರಣವಾಗಿರುತ್ತದೆ.

ಇದೇ ರೀತಿ ಬೆಳಗಾವಿ ನಗರದಲ್ಲಿ ಇಂತಹ ಗೂಂಡಾ ವರ್ತನೆಯಿಂದ ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಇನ್ನೂ 3-4 ಜನರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದು, ಅವರ ವಿರುದ್ಧವೂ ಸಹ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಆಯುಕ್ತರು ತಿಳಿಸಿರುತ್ತಾರೆ.

ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಐಪಿಎಸ್, ಪೊಲೀಸ್ ಆಯುಕ್ತರು, ಬೆಳಗಾವಿ ನಗರ ರವರ ಮಾರ್ಗದರ್ಶನ ಹಾಗೂ ರೋಹನ ಜಗದೀಶ ಐಪಿಎಸ್. ಡಿಸಿಪಿ (ಕಾ&ಸು) ಬೆಳಗಾವಿ ನಗರ ರವರ ನೇತೃತ್ವದಲ್ಲಿ ಸದಾಶಿವ ಕಟ್ಟಿಮನಿ ಎಸಿಪಿ ಅಪರಾಧ & ಶೇಖರಪ್ಪ ಎಚ್, ಎಸಿಪಿ ಖಡೇಬಜಾರ ಹಾಗೂ ಕಿರಣ ಹೊನಕಟ್ಟಿ ಪಿಎಸ್‌ಐ ಉದ್ಯಮಬಾಗ ರವರ ಸತತ ಪ್ರಯತ್ನದಿಂದಾಗಿ ಕುಖ್ಯಾತ ರೌಡಿ ವಿಶಾಲ ಸಿಂಗ್ ಚವ್ಹಾಣ (25) ಸಾ।। ಕದಮ ಬಿಲ್ಡಿಂಗ್ ಶಾಸ್ತ್ರಿ ನಗರ, ಬೆಳಗಾವಿ ಈತನ ಹೆಡಮುರಿ ಕಟ್ಟುವಲ್ಲಿ ಬೆಳಗಾವಿ ನಗರ ಪೊಲೀಸ್‌ರು ಯಶಸ್ವಿಯಾಗಿದ್ದಾರೆ.

“ವಿಶಾಲ್ ಸಿಂಗ್ ಚೌಹಾಣ್ ಇದೀಗ ಗುಲ್ಬರ್ಗಾ ಜೈಲಿನಲ್ಲಿದ್ದಾನೆ. ಪೊಲೀಸ್ ಕಮಿಷನರ್ ಐಡಾ ಮಾರ್ಟಿನ್ ಸರ್ ಅವರ ವಿರುದ್ಧ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ ಮತ್ತು ಅದನ್ನು ಹೈಕೋರ್ಟ್ 3 ನ್ಯಾಯಾಧೀಶ ಪೀಠದ ಮುಂದೆ ದೃಢಪಡಿಸಿದ್ದಾರೆ. ಕರ್ನಾಟಕ, ಗೋವಾ ಮತ್ತು ಎಂಎಚ್‌ನ 3 ರಾಜ್ಯಗಳಲ್ಲಿ ಈತನಿಗೆ 14 ಹೇಯ ಅಪರಾಧ ಪ್ರಕರಣಗಳಿವೆ. ಈತ ಕೊಲೆ, ಕೊಲೆ ಯತ್ನ, ಸುಲಿಗೆಗಾಗಿ ಅಪಹರಣ, ದರೋಡೆ, ಸುಪಾರಿ, ಶಸ್ತ್ರಾಸ್ತ್ರ ಕಾಯ್ದೆ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬೆಳಗಾವಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಇಂತಹ ಗೂಂಡಾ ಕಾಯ್ದೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಅಂಗೀಕರಿಸಿರುವುದು ಇದೇ ಮೊದಲು. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮ ಇಡೀ ತಂಡವನ್ನು ನಾವು ಅಭಿನಂದಿಸುತ್ತೇವೆ” ಎಂದು ಡಿಸಿಪಿ ಸ್ನೇಹಾ ಪಿವಿ ತಿಳಿಸಿದ್ದಾರೆ.

Related Articles

Back to top button