Kannada NewsLatest

ಮಾತಿಗೆ ಮಾತು ಬೆಳೆದು ಬಸ್ ಕಂಟ್ರೋಲರ್ ಮೇಲೆ ಹಲ್ಲೆ; ಆರೋಪಿ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾತಿಗೆ ಮಾತು ಬೆಳೆದು ಬಸ್ ಕಂಟ್ರೋಲರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ.

ರಾಮದುರ್ಗ ಹಳೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಸ್ ಕಂಟ್ರೋಲರ್ ಹಣಮಂತ ಬಂಡಿವಡ್ಡರ್ ಹಲ್ಲೆಗೊಳಗಾದವರು. ನಿಂಗದಾಳ ಗ್ರಾಮ ವ್ಯಕ್ತಿಯೊಬ್ಬ ಗ್ರಾಮಕ್ಕೆ  ಬಸ್ ಸರಿಯಾಗಿ ಬರುತ್ತಿಲ್ಲ ಎಂದು ದೂರು ನೀಡಲು ಹೋಗಿದ್ದ.ಈ ವೇಳೆ ಕಂಟ್ರೋಲರ್ ಹಾಗೂ ವ್ಯಕ್ತಿ ಮಧ್ಯೆ ಮಾತಿಗೆ ಮಾತು ಬೆಳೆದು  ಕೆರಳಿದ ವ್ಯಕ್ತಿ ಹಣಮಂತ ಬಂಡಿವಡ್ಡರ್ ಅವರ ಮೇಲೆ  ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

Home add -Advt

ಈ ವೇಳೆ ಹಲ್ಲೆ ನಡೆಸಿದ ಆರೋಪಿಯನ್ನು ಅಲ್ಲಿದ್ದ ಇತರ ಸಿಬ್ಬಂದಿ ಹಿಡಿದು ಪೊಲೀಸರಿಗೆ ಮಾಹಿತ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ರಾಮದುರ್ಗ ಠಾಣೆ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಶ್ವಾಸಮತಯಾಚನೆಯಲ್ಲಿ ಗೆದ್ದು ಬೀಗಿದ ಏಕನಾಥ್ ಶಿಂಧೆ

Related Articles

Back to top button