ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸೋಮವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಚಾರ ನಿಷೇಧಿಸಲಾಗಿದೆ.
ಈ ವೇಳೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಂಚಾರ ಅಡಚಣೆಯಾದಲ್ಲಿ ಕೂಡಲೇ ನಗರ ಪೊಲೀಸ್ರಿಗೆ ಸಂಪರ್ಕಿಸುವಂತೆ ಪೊಲೀಸ್ ಆಯುಕ್ತರು ಕೋರಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೧೮ನೇ ಘಟಿಕೋತ್ಸವದ ನಿಮಿತ್ಯ ಉಪರಾಷ್ಟ್ರಪತಿಗಳು, ಆಗಮಿಸುವವರಿದ್ದು, ಅವರ ಆಗಮನದ ಸಮಯದಲ್ಲಿ ಸುರಕ್ಷಿತ ಸುಗಮ ಸಂಚಾರದ ದೃಷ್ಟಿಯಿಂದ ನಗರದ ಕೆಲವು ಮಾರ್ಗಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಮಾರ್ಗಗಳನ್ನು ಬದಲಿಸಲಾಗಿದೆ.
ಸೋಮವಾರ ಬೆಳಗಾವಿ ನಗರ ಸಂಚಾರದಲ್ಲಿ ಭಾರೀ ಬದಲಾವಣೆ
ಬೆಳಗಾವಿ: ಪಿಯುಸಿ ಪರೀಕ್ಷಾರ್ಥಿಗಳೇ ನಾಳೆ ಪರೀಕ್ಷಾಕೇಂದ್ರಕ್ಕೆ ಬೇಗ ತಲುಪಿ
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹೋಗಲು ಯಾವುದೇ ಅಡೆತಡೆಯಿಲ್ಲ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳುವಾಗ ಸಂಚಾರ ಮಾರ್ಗ ಬದಲಾವಣೆ ಅಥವಾ ಮಾರ್ಗ ನಿರ್ಬಂಧನೆಯ ಬಗ್ಗೆ ಯಾವುದೇ ತೊಂದರೆಯಾದಲ್ಲಿ ಕೂಡಲೇ ಅಲ್ಲಿಯೇ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವುದು. ಅಥವಾ ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಂ ಅಥವಾ ನಗರದ ಉಪವಿಭಾಗಗಳ ಸಹಾಯಕ ಪೊಲೀಸ್ ಆಯುಕ್ತರನ್ನು ಕೂಡಲೇ ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
೧. ಪೊಲೀಸ್ ಕಂಟ್ರೋಲ್ ರೂಂ. 100 ಅಥವಾ 0831-2405233
೨. ಮಾರ್ಕೆಟ ಉಪವಿಭಾಗ ಎನ್ ವಿ ಬರಮನಿ. ಮೋ ನಂ. 9480804021
೩. ಖಡೇಬಜಾರ ಉಪವಿಭಾಗ ಚಂದ್ರಪ್ಪ. ಮೋ ನಂ. 9480804020
೪. ಬೆಳಗಾವಿ ಗ್ರಾಮೀಣ ಉಪವಿಭಾಗ ಕೆ. ಶಿವಾ ರೆಡ್ಡಿ. ಮೋ ನಂ. 9480804022
೫. ಸಂಚಾರ ಉಪವಿಭಾಗ ಆರ್.ಆರ್. ಕಲ್ಯಾಣಶೆಟ್ಟಿ ಮೋ ನಂ. 9480804654
ಈ ಕುರಿತು ಬೆಳಗಾವಿ ನಗರದಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗುತ್ತಿರುವ ಯಾವುದೇ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕ ಪಡಬಾರದು ಎಂದು ಪೊಲೀಸ್ ಆಯುಕ್ತರು ಕೋರಿದ್ದಾರೆ.
(ಈ ಸುದ್ದಿಯನ್ನು ಎಲ್ಲರಿಗೂ ಶೇರ್ ಮಾಡಿ)