Kannada NewsKarnataka NewsLatest

9 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿದ ಅಪ್ಪ, ಮಗ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಮಾಜಿ ಸಚಿವ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ  ಹಾಗೂ ಶಾಸಕ  ಗಣೇಶ ಹುಕ್ಕೇರಿ  ಗುರುವಾರ ಸುಮಾರು 9 ಸಾವಿರ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಿದರು.

ಮಹಾಮಾರಿ ಕೊರೋನಾ ಕಾಯಿಲೆಯ ತಡೆಗಟ್ಟುವ ಸಲುವಾಗಿ ದೇಶದಲ್ಲಿ ಲಾಕ್ಡೌನ್ ಇರುವುದರಿಂದ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ನಿರಂತರವಾಗಿ ಬಡವರಿಗೆ ವಿವಿಧ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.
 ಅಣ್ಣಪೂರ್ಣೇಶ್ವರಿ ಫೌಂಡೇಶನ ವತಿಯಿಂದ  ಸದಲಗಾ ಪಟ್ಟಣ ಪಂಚಾತಿಯಿ ವ್ಯಾಪ್ತಿಯ 23 ವಾರ್ಡ್ ಗಳ ಸುಮಾರು 9000 ಸಾವಿರ ಕುಟುಂಬಗಳಿಗೆ ಉಚಿತವಾಗಿ ಆಹಾರಧಾನ್ಯ ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಸದಲಗಾ ಪಟ್ಟಣದ ಪುರಸಭೆ ಸದಸ್ಯರು,  ಆ ಭಾಗದ ಮುಖ್ಯಸ್ಥರು, ಊರಿನ ಹಿರಿಯರು ಹಾಗೂ ಗ್ರಾಮಸ್ಥರು  ಉಪಸ್ಥಿತರಿದ್ದರು.

ವಡಗೂಲ ಗ್ರಾಮದಲ್ಲಿ ಮಾಜಿ ಸಂಸದರಾದ ಪ್ರಕಾಶ ಹುಕ್ಕೇರಿಯರು ಗ್ರಾಮದ ಜನರಿಗೆ ಸುಮಾರು 600 ಜೋಳದ ಕಿಟ್ಟಗಳನ್ನು ವಿತರಿಸಿದರು.

Home add -Advt

Related Articles

Back to top button