Kannada NewsLatest

ನಾಲೆಗಾಗಿ ವಶ ಪಡಿಸಿಕೊಂಡ ಜಮೀನು ವಾಪಸ್ ನೀಡಿ; ಜಿಲ್ಲಾಧಿಕಾರಿಗೆ ರೈತರ ಮನವಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದ 30 ರೈತರ ಜಮೀನನ್ನು ಬಳ್ಳಾರಿ ನಾಲಾ ನಿರ್ಮಾಣಕ್ಕಾಗಿ ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ‌, ನಮ್ಮ ಜಮೀನಿನನ್ನು ಮರಳಿ ನಮ್ಮ ಹೆಸರಿಗೆ ಮಾಡಿಕೊಡಬೇಕು ಎಂದು ಸಂತ್ರಸ್ತ ರೈತರು ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಭೂಸ್ವಾಧೀನಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಬಳ್ಳಾರಿ ನಾಲಾ ನಿರ್ಮಾಣ ಯೋಜನೆಯ ಕಾಮಗಾರಿ ಅನುಷ್ಠಾನಕ್ಕೆ ಗುರುತಿಸಲಾಗಿರುವ ರೈತರ ಹೊಲಗಳು ಹಾಗೆಯೇ ಇವೆ. ಆ ರೈತರಿಗೆ ಪರಿಹಾರವನ್ನೂ ನೀಡಲಾಗಿದೆ.

ಆದರೆ ನಾವು 30 ರೈತರ ಹೊಲಗಳು ಯೋಜನೆಯ ವ್ಯಾಪ್ತಿಯಲ್ಲಿ ಬರದಿದ್ದರೂ ನಮ್ಮ ಜಮೀನನ್ನು ವಶಕ್ಕೆ ಪಡೆಯಲಾಗಿದ್ದು ಪಹಣಿಯಲ್ಲಿ ಕನಿನಿನಿ ಎಂದು ಭೂಮಿಯ ಒಡೆತನವನ್ನು ಬದಲಾಯಿಸಲಾಗಿದೆ. ಇದರಿಂದ ನಮಗೆ ಅನ್ಯಾಯವಾಗಿದೆ. ನಮ್ಮ ಜಮೀನನ್ನು ನಮಗೆ ವಾಪಸ್ ಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬೆಳಗಾವಿ ಕಾಲೇಜಿನಲ್ಲಿ ಹಿಜಾಬ್ ವಿವಾದ; 6 ಯುವಕರು ವಶಕ್ಕೆ

Home add -Advt

Related Articles

Back to top button