Kannada NewsUncategorized

*ಡಿ.ಕೆ.ಶಿವಕುಮಾರ್ ವಿರುದ್ಧ ಯತ್ನಾಳ್ ವಾಗ್ದಾಳಿ; ಲಕ್ಷ್ಮಣ ಸವದಿ ವಿರುದ್ಧವೂ ಕಿಡಿ ಕಾರಿದ ಬಿಜೆಪಿ ಶಾಸಕ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿ ಲಿಂಗಾಯತರಿಗೆ ಎಂದಿಗೂ ಮೋಸ ಮಾಡಿಲ್ಲ. ಸೋತ ಲಿಂಗಾಯತರಿಗೆ ದೊಡ್ಡ ಸ್ಥಾನ ಮಾನ ನೀಡಿದೆ. ಅವರು ಕಾಂಗ್ರೆಸ್ ಗೆ ಹೋದರೆ ಯಾವುದೇ ಪ್ರಭಾವ ನಮ್ಮ ಪಕ್ಷಕ್ಕೆ ಬಿರುವುದಿಲ್ಲ ಎಂದು ವಿಜಯಪುರ ಬಿಜೆಪಿ‌ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ್, ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿಯಿಂದ ಏನು ಅನ್ಯಾಯವಾಗಿದೆ. ಅಲ್ಲದೆ ಲಕ್ಷ್ಮಣ ಸವದಿಗೂ ಅನ್ಯಾಯ ಮಾಡಿಲ್ಲ. ಮಹೇಶ ಕುಮಟಳ್ಳಿ ಅವರಿಗೆ ಅನ್ಯಾಯವಾಗಿದೆ. ಕಾರಣ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ಎಲ್ಲರಿಗೂ ಸಚಿವ ಸ್ಥಾನ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರಿಗೆ ನೀಡಲಿಲ್ಲ. ಲಕ್ಷ್ಮಣ ಸವದಿ ಅವರು ಸೋತಿದ್ದರೂ ಡಿಸಿಎಂ ಆಗಿದ್ದು ಮಹೇಶ ಕುಮಟಳ್ಳಿಯಿಂದ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕಾಂಗ್ರೆಸ್ ಅಧ್ಯಕ್ಷರೇ ಗೂಂಡಾ ಇದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದೂರು ನೀಡಿರುವ ಅವರ ನಡುವಳಿಕೆ ನೋಡಿದರೆ ಈಗಲೇ ಜನರಿಗೆ ಭಯದ ವಾತಾವರಣ ಇದೆ ಎಂದು ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರು ಜೈಲಿಗೆ ಹೋಗಿ ಬಂದಿದ್ದು ಸ್ವಾತಂತ್ರ್ಯ ಹೋರಾಟ‌ ಮಾಡಿಯೇ ಅಥವಾ ಭ್ರಷ್ಟಾಚಾರ‌ ಮಾಡಿಯೇ? ಎಂದು ಹರಿಹಾಯ್ದರು.

Home add -Advt

ಇದೇ ವೇಳೆ ಸತೀಶ್ ಜಾರಕಿಹೊಳಿ ವಿರುದ್ಧವೂ ಕಿಡಿಕಾರಿದ ಅವರು, ಯಮಕನಮರಡಿಯಲ್ಲಿರುವ ಶಾಸಕರಿಗೆ ಹಿಂದೂ ಎಂದರೆ ಅಶ್ಲೀಲ ಪದ ಎನ್ನುವ ಅವರು, ಈ ಉದ್ದುದ್ದ ನಾಮ ಬರೆದುಕೊಂಡು ತಿರುಗಾಡುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಟಿಕೆ ಮಾಡಿರುವ ವ್ಯಕ್ತಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಲಿಂಗಾಯತ ನಾಯಕರು ಬಿಜೆಪಿ ಬಿಟ್ಟು‌ ಹೋಗಲು ಬಿ.ಎಲ್.ಸಂತೋಷ ದಬ್ಬಾಳಿಕೆಯಿಂದ ಅಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಲಕ್ಷ್ಮಣ ಸವದಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಮಾಡಿದ್ದೆ ಬಿ.ಎಲ್.ಸಂತೋಷ ಅವರು ಎಂದರು.

ಕಳೆದ ಎರಡೂ ದಿನದಿಂದ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಗಣನೀಯವಾಗಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

ಬಿಜೆಪಿ ಸರಕಾರ ಎಲ್ಲ ಸಮುದಾಯಕ್ಕೆ ಮೀಸಲಾತಿ ನೀಡಿದೆ. ಮೊದಲು ವಿಪಕ್ಷಗಳು ಬಿಜೆಪಿ ಎಂದರೆ ದಲಿತ ವಿರೋಧಿ ಎಂದು ಬಿಂಬಿಸುತ್ತಿದ್ದವು. ಆದರೆ ಎಲ್ಲ ಸಮುದಾಯಕ್ಕೆ ಬಿಜೆಪಿ ಸರಕಾರ ಮೀಸಲಾತಿ ನೀಡಿ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು‌ ಹೋಗುವ ಕೆಲಸ ಮಾಡಿದೆ ಎಂದರು.

ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜೀರಲಿ, ಶರದ್ ಪಾಟೀಲ, ನಿತೀಶ್ ಚೌಗುಲೆ, ಎಫ್.ಎಸ್.ಸಿದ್ದನಗೌಡರ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

https://pragati.taskdun.com/siddaramaiahcm-basavaraj-bommaipm-modiraichur/

Related Articles

Back to top button