Belagavi NewsBelgaum NewsKannada NewsKarnataka News
*ಕರಡಿ ದಾಳಿ: ಆಸ್ಪತ್ರೆಗೆ ದಾಖಲಾದ ರೈತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಲೊಂಡಾದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ 65 ವರ್ಷದ ರೈತನ ಮೇಲೆ ಮೂರು ಕರಡಿ ದಾಳಿ ಮಾಡಿದ ಪರಿಣಾಮ ಮಂಗಳವಾರ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರಡಿ ದಾಳಿಗೆ ಒಳಗಾದ ರೈತ ಪ್ರಭು ದೇಸೂರಕರ ಎಂದು ಗುರುತಿಸಲಾಗಿದೆ. ಜಮೀನಲ್ಲಿ ಕೆಲಸ ಮಾಡುತ್ತಿರುವಾಗ ದಾಳಿ ನಡೆಸಿದ ಕರಡಿ ಹಿಂಡು ಪ್ರಭುವಿನ ಮೇಲೆ ಭೀಕರ ದಾಳಿ ನಡೆಸಿವೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.




