Karnataka News

*ಪತ್ನಿ ಸೀಮಂತದ ಸಿದ್ಧತೆ ವೇಳೆ ಕುಸಿದು ಬಿದ್ದು ಪತಿ ಸಾವು*

ಪ್ರಗತಿವಾಹಿನಿ ಸುದ್ದಿ: ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದ ಪತಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

ಕನ್ಯಾನ ಮಿತ್ತನಡ್ಕ ನಿವಾಸಿ ಸತೀಶ್ (33) ಮೃತ ದುರ್ದೈವಿ. ಪಿಕಪ್ ವಾಹನ ಚಾಲಕನಾಗಿದ್ದ ಸತೀಶ್, ಪತ್ನಿಯ ಸೀಮಂತಕ್ಕೆ ಮನೆಯಲ್ಲಿ ತಯಾರಿ ನಡೆಸುತ್ತಿದ್ದರು, ಸೀಮಂತದ ದಿನವೇ ಮನೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಸೀಮಂತದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

Home add -Advt


Related Articles

Back to top button