Kannada NewsKarnataka News

ಭುತ್ತೇವಾಡಿ ಕೊಲೆ ಪ್ರಕರಣ: ಇಬ್ಬರ ಬಂಧನ


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಭುತ್ತೇವಾಡಿ ಗ್ರಾಮದಲ್ಲಿ ಭಾನುವಾರ ದಾರುಣವಾಗಿ ಕೊಲೆಯಾಗಿದ್ದ
ಲಕ್ಷ್ಮಣ ಯಲ್ಲಪ್ಪ ಸುತಾರ (75) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಗಡ
ಪೊಲೀಸರು ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ
ಒಪ್ಪಿಸಿದ್ದಾರೆ.

ಭುತ್ತೇವಾಡಿ ಗ್ರಾಮದ ನಾಗೋಜಿ ಪರಶುರಾಮ ಸುತಾರ ಮತ್ತು ಆತನ ದೂರದ
ಸಂಬಂಧಿ ಓಂಕಾರ ಸುತಾರ ಬಂಧಿತರು.
ಕೊಲೆಯಾದ ಲಕ್ಷ್ಮಣ ಮತ್ತು ಅವರ ದೂರದ ಸಂಬಂಧಿ ನಾಗೋಜಿ ನಡುವೆ ಕಳೆದ ಹಲವು ವರ್ಷಗಳಿಂದ
ಆಸ್ತಿ ವಿವಾದವಿತ್ತು. ಲಕ್ಷ್ಮಣ ಅವರ ಕೊಲೆಯ ತನಿಖೆ ಕೈಗೊಂಡ ಪೊಲೀಸರಿಗೆ ಲಕ್ಷ್ಮಣನ
ಕುಟುಂಬ ಹಾಗೂ ನೆರೆಹೊರೆಯವರು ಮೃತ ಲಕ್ಷ್ಮಣ ಮತ್ತು ನಾಗೋಜಿ ನಡುವೆ ಇದ್ದ ವೈಮನಸ್ಸಿನ
ಬಗ್ಗೆ ಮಾಹಿತಿ ನೀಡಿದ್ದರು. ನಾಗೋಜಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ
ನಡೆಸಿದಾಗ ಆತ ಲಕ್ಷ್ಮಣ ಅವರನ್ನು ಕೊಲೆ ಮಾಡಿದ್ದಾಗಿ
ಒಪ್ಪಿಕೊಂಡಿದ್ದು, ಇಬ್ಬರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಧೀಶರ
ಆದೇಶದನ್ವಯ ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ನಂದಗಡ ಠಾಣೆಯ
ಪೊಲೀಸರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button