Latest

ಪ್ರಾಣ ಬಿಟ್ಟೇವು; ಪಿಂಚಣಿ ಬಿಡೆವು: NPS ಹೋರಾಚಕ್ಕೆ ಮತ್ತೊಂದು ಬಲಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ನಡೆಯುತ್ತಿರುವ ಹೋರಾಟಕ್ಕೆ ಮತ್ತೊಂದು ಬಲಿಯಾಗಿದೆ.
 ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ನಿವೃತ್ತ ಶಿಕ್ಷಕರು ವಿಷ ಸೇವಿಸಿದ್ದರು. ಅವರಲ್ಲಿ ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದ ಸಿದ್ದಯ್ಯ ಹಿರೇಮಠ ಚಿಕಿತ್ಸೆಗೆ ಸ್ಪಂದಿಸದೆ  ನಿಧನರಾಗಿದ್ದಾರೆ.  ಮತ್ತೊಬ್ಬ ಶಿಕ್ಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ವಾರ ಸಿಂದನೂರಿನ ಶಂಕರಪ್ಪ ನಾಗಪ್ಪ ಬೋರಡ್ಡಿ ಎನ್ನುವ ಶಿಕ್ಷಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಕಳೆದ 140 ದಿನಗಳಿಂದ ಎನ್ ಪಿಎಸ್ ನೌಕರರು ನಿರಂತರ ಹೋರಾಟ ನಡೆಸುತ್ತಿದ್ದಾರೆ.

 

 

Home add -Advt

https://pragati.taskdun.com/7-pay-commission-government-employees-strike-fix/

Related Articles

Back to top button