Latest

ಬಿಜೆಪಿ ಶಾಸಕ ಹೃದಯಾಘಾತದಿಂದ ಸಾವು

ಪ್ರಗತಿವಾಹಿನಿ ಸುದ್ದಿ; ಪುದುಚೇರಿ: ಬಿಜೆಪಿ ಹಿರಿಯ ಶಾಸಕ ಕೆ.ಜಿ.ಶಂಕರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಪುದುಚೇರಿಯ ಬಿಜೆಪಿ ಘಟಕದ ಖಜಾಂಚಿಯಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು. ರಾಜ್ಯ ಸರ್ಕಾರದಿಂದ ವಿಧಾನಸಭೆಗೆ ನಾಮನಿರ್ದೇಶನಗೊಂಡಿದ್ದರು.

1950ರಲ್ಲಿ ಜನಿಸಿದ ಶಂಕರ್ ಚಿಕ್ಕಂದಿನಲ್ಲೇ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಶಾಸಕ ಶಂಕರ್ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.

Home add -Advt

Related Articles

Back to top button