Politics

*ಪ್ರತಿಭಟನೆ ತಡೆಯಲು ಮುಂದಾದ ಪೊಲೀಸರ ಮೇಲೆ ಆರ್.ಅಶೋಕ್ ರೋಷಾವೇಷ*

ಪ್ರಗತಿವಾಹಿನಿ ಸುದ್ದಿ: ಬಸ್ ಟಿಕೆಟ್ ದರ ಏರಿಕೆ ಖಂಡಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದು, ತಡೆಯಲು ಮುಂದಾದ ಪೊಲಿಸರ ಮೇಲೆಯೇ ಆರ್.ಅಶೋಕ್ ರೋಷಾವೇಷ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಬಸ್ ಪ್ರಯಾಣ ದರ ಏರಿಕೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಮೆಜೆಸ್ಟಿಕ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಬಸ್ ನಿಲ್ದಣಕ್ಕೆ ನುಗ್ಗಲು ಯತ್ನಿಸುತ್ತಿದ್ದಂತೆ ಪೊಲೀಸರು ಪ್ರತಿಭಾನಾಕಾರರ ತಡೆದಿದ್ದಾರೆ.

ಪ್ರತಿಭಟನೆ ತಡೆಯುತ್ತಿದಂತೆ ಆರ್.ಅಶೋಕ್ ಪೊಲೀಸರ ವಿರುದ್ಧ ವಾಗ್ವಾದ ನಡೆಸಿದ್ದಾರೆ. ನಾವೇನು ಇಲ್ಲಿ ಪ್ರತಿಭಟನೆ ಮಡಲು ಬಂದಿಲ್ಲ. ಪ್ರಯಾಣಿಕರಿಗೆ ಗುಲಾಬಿ ಹೂ ನೀಡಲು ಬಂದಿದ್ದೇವೆ. ನಾವು ನಿಮ್ತ ಜಾಗಕ್ಕು ಟ್ಯಾಕ್ಸ್ ಕಟ್ಟಬೇಕಾ? ಎಂದು ಕಿಡಿಕಾರಿದ್ದಾರೆ.

Home add -Advt

ಈ ವೇಳೆ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಗಳು ಆರ್.ಅಶೋಕ್ ಬಳಿ ಹೋಗಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಡುತ್ತಿದ್ದಂತೆ ಬಿಜೆಪಿ ನಾಯಕರು, ಪೊಲೀಸರ ನಡುವೆ ನೂಕಾಟ ತಳ್ಳಾಟವೂ ನಡೆದಿದೆ. ಈ ವೇಳೆ ಪೊಲೀಸರ ವಿರುದ್ಧ ಕಿಡಿಕಾರಿದ ಆರ್.ಅಶೋಕ್, ನಮ್ಮನ್ನು ತಡೆಯಲು ನೀವ್ಯಾರು? ಬಂಧಿಸಿದರೆ ಹುಷಾರ್! ಮುಂದೆ ಇದೇ ಸರ್ಕಾರ ಇರಲ್ಲ ಎಚ್ಚರವಿರಲಿ ಎಂದು ಆವಾಜ್ ಹಾಕಿದ್ದಾರೆ.

Related Articles

Back to top button