Belagavi NewsBelgaum NewsKarnataka News

*ಬುಡಾ ಲೇಔಟ್ ಶೀಘ್ರ ಪ್ರಾರಂಭಿಸಿ, ಇಲ್ಲವೇ 18 ವರ್ಷಗಳ ಪರಿಹಾರ ನೀಡಿ*

ಸರ್ಕಾರಕ್ಕೆ ರೈತರ ಆಗ್ರಹ

ಪ್ರಗತಿವಾಹಿನಿ ಸುದ್ದಿ: ಕಣಬರಗಿ ಸ್ಕೀಮ್ ನಂ61 ರೈತರ ಹಿತರಕ್ಷಣಾ ಕಮಿಟಿ ಬೆಳಗಾವಿ ವತಿಯಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಫೊಟೊಗೆ ಪೂಜೆ ಸಲ್ಲಿಸಿ ಮಹಾ ಪರಿವರ್ತನಾ ದಿನಾಚರಣೆ ಆಚರಿಸಲಾಯಿತು.

ಇದೇ ವೇಳೆ ಬೆಳಗಾವಿ ನಗರಾಬಿವೃದ್ದಿ ಪ್ರಾಧಿಕಾರದ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಲಾಯಿತು.


2007 ರಲ್ಲಿ ಕಣಬರಗಿ ರೈತರಿಂದ ಬೆಳಗಾವಿ ನಗರಾಬಿವೃದ್ದಿ ಪ್ರಾಧಿಕಾರ ಲೇಔಟ್ ಗಾಗಿ 165 ಎಕರೆ ಜಮೀನು ಪಡೆದು ಇದುವರೆಗೂ ಬುಡಾ ಲೇಔಟ್ ಪ್ರಾರಂಭಿಸದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ . ಬೆಳಗಾವಿ ನಗರಾಬಿವೃದ್ದಿ ಪ್ರಾಧಿಕಾರದ ಬೇಜವಾಬ್ದಾರಿ ಕೆಲಸವನ್ನು ವಿರೋಧಿಸಿ ಇವತ್ತು ಕಣಬರಗಿ ಸ್ಕೀಮ್ ನಂ61 ರ ರೈತರಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಆದಷ್ಟು ಬೇಗ ಪೂರ್ಣವಾಗಿ ಲೇಔಟ್ ಪ್ರಾರಂಭಗೊಳಿಸಿ ರೈತರಿಗೆ ಪ್ಲಾಟ್ ಗಳನ್ನು ಹಸ್ತಾಂತರಿಸಬೇಕು. ಇಲ್ಲವಾದರೆ ರೈತರಿಗೆ ವಾಪಸ್ಸು ಅವರ ಜಮೀನು ನೀಡಿ 18 ವರ್ಷಗಳ ಪರಿಹಾರ ಧನವನ್ನು ನೀಡುವಂತೆ ಬುಡಾ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬುಡಾ ಅದ್ಯಕ್ಷರು ಹಾಗೂ ಆಯುಕ್ತರು ಧರಣಿ ನಿರತರನ್ನು ಮಾತನಾಡಿಸಿ ಸ್ಕೀಮ್ ನಂ.61 ರ ಲೇಔಟ್ ಯೋಜನೆ ಕೆಲವು ಅಡೆತಡೆಗಳಿಂದ ತಡವಾಯಿತು. ಈಗಾಗಲೇ ಟೆಂಡರ್ ಕರೆಯಲಾಗಿದೆ. ಜನವರಿ ತಿಂಗಳಲ್ಲಿ ಸಂಪೂರ್ಣ ಲೇಔಟ್ ಅಭಿವೃದ್ಧಿ ಆಗುತ್ತದೆ. ದಯವಿಟ್ಟು ಸಹಕಾರ ನೀಡಿ, ಹೋರಾಟ ಹಿಂಪಡೆಯಿರಿ ಎಂದು ಮನವಿ ಮಾಡಿದರು .

ಬಳಿಕ ರೈತರು ಹೋರಾಟ ನಿಲ್ಲಿಸಿದರು. ರೈತರು ಕೊನೆ ಅವಕಾಶ ನೀಡಿ 2025 ರ ಜನವರಿಯಲ್ಲಿ ಪೂರ್ಣ ಲೇಔಟ್ ಕಾಮಗಾರಿ ಪ್ರಾರಂಭವಾಗಿ ರೈತರಿಗೆ ಪ್ಲಾಟ್ ಹಸ್ತಾಂತರವಾಗದಿದ್ದರೆ ಬುಡಾ ಕಚೇರಿಗೆ ಬೀಗ ಜಡಿದು ಇಲಾಖೆಯನ್ನು ಕಾಲಿ ಮಾಡಿಸುವ ಕೆಲಸ ಮಾಡುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಣಬರಗಿ ಸ್ಕೀಮ್ ನಂ 61 ರ ರೈತ ಹಿತರಕ್ಷಣಾ ಕಮೀಟಿ ಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು .

ಸಿದ್ರಾಯಿ ಶಿಗಿಹಳ್ಳಿ,
ಬಾಲಗೌಡ ಪಾಟೀಲ್,
ಮಹೇಶ್ ಶೀಗಿಹಳ್ಳಿ,
ಬಿ ಬಿ ಪಾಟೀಲ್,
ನಂದಕುಮಾರ್ ಸಂಕೇಶ್ವರ,
ಲಕ್ಷ್ಮಣ್ ಮುತಗೇಕರ್,
ಬಸವಂತ ಮುತಗೇಕರ್,
ಅಜಿತ್ ಪಾಟೀಲ್,
ಪ್ರಕಾಶ್ ಶೀಗಿಹಳ್ಳಿ,
ಮಾರುತಿ ಶೀಗಿಹಳ್ಳಿ
ಶಿವಾಜಿ ಪಾಟೀಲ್,
ದಾಕಲೂ ಮಲಾಯಿ,
ಸುಶಾಂತ್ ಮುಚಂಡೀಕರ್,
ಮಹಿಳಾ ಬಳಗದವರು ಕೂಡ ಭಾಗಿಯಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button