
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರಿ ಸೇವೆಗೆ 2005ರ ನತಂರ ಸೇರ್ಪಡೆಯಾದ ನೌಕರರಿಗೆ ಹಳೆಯ ಪಿಂಚಣಿ ರದ್ದುಪಡಿಸಿ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸುವುದು ರಾಜ್ಯ ಸರಕಾರದ ಗಮನಕ್ಕೆ ಬಂದಿದೆಯೇ?
ಕಾಂಗ್ರೆಸ್ ನ ಅಜಯ ಧರ್ಮಸಿಂಗ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೇರವಾಗಿ ಕೇಳಿದ ಪ್ರಶ್ನೆ ಇದೆ. ಇದಕ್ಕೆ ಮುಖ್ಯಮಂತ್ರಿಗಳು ನೀಡುವ ಉತ್ತರ “ಹೌದು”
ಪೂರಕ ಪ್ರಶ್ನೆಗಳು:
ಬಂದಿದ್ದಲ್ಲಿ ಈ ನೌಕರರಿಗೆ ಅಳವಡಿಸಲಾಗಿರುವ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಗೆ ಅಳವಡಿಸಲು ಸರಕಾರ ಕ್ರಮ ಕೈಗೊಳ್ಳುವುದೇ?
ಹಾಗಿದ್ದಲ್ಲಿ ಯಾವ ಕಾಲಮಿತಿಯಲ್ಲಿ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆ ಅಳವಡಿಸಿ ಈ ನೌಕರರಿಗೆ ನ್ಯಾಯ ಒದಗಿಸಲಾಗುವುದು?
ಇಲ್ಲಿದಿದ್ದಲ್ಲಿ ಕಾರಣಗಳೇನು?
ಮುಖ್ಯಮಂತ್ರಿಗಳ ಉತ್ತರ:
ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೂಕ್ತ ಬದಲಾವಣೆ/ ಮಾರ್ಪಾಡು ಮಾಡಲು 2018ರಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿಯನ್ನು ನಿರೀಕ್ಷಿಸಲಾಗಿದೆ.
ಮುಖ್ಯಮಂತ್ರಿಗಳ ಗಮನಕ್ಕೆ,
ವಿಪರ್ಯಾಸವೆಂದರೆ, 3 ವರ್ಷವಾದರೂ ಈ ಸಮಿತಿ ಸಭೆಗಳನ್ನೇ ನಡೆಸುತ್ತಿಲ್ಲ, ಹಾಗಾಗಿ ಸರಕಾರಿ ನೌಕರರ ಅತ್ಯಂತ ಪ್ರಮುಖವಾದ ಈ ಬೇಡಿಕೆ ಈಡೇರುತ್ತಿಲ್ಲ. ಈ ಸಮಿತಿಯನ್ನು ವಿಸರ್ಜಿಸಿ ಹೊಸದಾಗಿ ಸಮಿತಿ ನೇಮಿಸುವ ಅಥವಾ ಹಳೆಯ ಪಿಂಚಣಿ ವ್ಯವಸ್ಥೆ ಮರು ಸ್ಥಾಪನೆಗೆ ಸರಕಾರ ನಿರ್ಧರಿಸಬೇಕು ಎನ್ನುವುದು ಸರಕಾರಿ ನೌಕರರ ಬೇಡಿಕೆಯಾಗಿದೆ. ತುರ್ತಾಗಿ ಮುಖ್ಯಮಂತ್ರಿಗಳು ಅಧಿಕಾರಿಗಳ ಸಮಿತಿಯ ಪ್ರಸಕ್ತ ಸ್ಥಿತಿ ಗತಿ, ಕಾರ್ಯವೈಖರಿ ಕುರಿತು ಮಾಹಿತಿ ಪಡೆಯಬೇಕಿದೆ.