Kannada NewsKarnataka NewsLatest

ರಕ್ತದಾನದೊಂದಿಗೆ ಅಭಿಮಾನ ಮೆರೆದ ಕಾರ್ಮಿಕರು

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸವದತ್ತಿಯ ಹರ್ಷ ಸಕ್ಕರೆ ಕಾರ್ಖಾನೆಯಲ್ಲಿ ಬೆಳಗಾವಿಯ ಬ್ಲಡ್ ಸೆಂಟರ್ ಮತ್ತು ಡೈಗ್ನೊಸ್ಟಿಕ್ ಲ್ಯಾಬೋರೇಟರಿ ಸಂಸ್ಥೆ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.

Home add -Advt

ಶಿಬಿರ ಉದ್ಘಾಟಿಸಿ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, “ಕಳೆದ ನಾಲ್ಕು ವರ್ಷಗಳಿಂದ ನಮ್ಮ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ವರ್ಗದವರು ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಸಾವಿರಾರು ಜನರಿಗೆ ರಕ್ತ ಪೂರೈಸುವ ಮೂಲಕ ಜೀವದಾನ ಮಾಡುವ ಕಾರ್ಯ ಪ್ರಶಂಸನೀಯವಾಗಿದೆ,” ಎಂದರು.

“ಕಾರ್ಮಿಕರ ಈ ರಕ್ತದಾನ ಶಿಬಿರ ನನ್ನ ಮೇಲೆ ಇಟ್ಟಂತಹ ಅವರ ಅಭಿಮಾನ ಹಾಗೂ ವಾತ್ಸಲ್ಯಭರಿತ ಪ್ರೀತಿಯನ್ನು ತೋರಿಸುತ್ತಿದೆ. ಅವರ ಈ ಸಮಾಜಮುಖಿ ಕಾರ್ಯಕ್ಕೆ ನನ್ನ ಹೃದಯಸ್ಪರ್ಶಿ ಸಲಾಂ,” ಎಂದು ಅವರು ಭಾವನಾತ್ಮಕತೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೊದಗಾ ಪಿಕೆಪಿಎಸ್ ಅಧ್ಯಕ್ಷ ಗಂಗಣ್ಣ ಕಲ್ಲೂರ, ಮಹಾಂತೇಶ ಮತ್ತಿಕೊಪ್ಪ, ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಸದಾಶಿವ ಥೋರಾತ್, ಮುಖ್ಯ ಆಡಳಿತ ಅಧಿಕಾರಿ, ಯು ಸಿ ಚೌಕಿಮಠ, ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕ ಎನ್.ಎಂ. ಪಾಟೀಲ, ಉಮೇಶ ರಾಚಣ್ಣವರ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬೆಳಗಾವಿಯ ಲಕ್ಷ್ಮೀ ತಾಯಿ ಸೌಹಾರ್ದ ಸಹಕಾರಿ ಸಂಘದ  ಮುಖ್ಯ ಕಾರ್ಯ ನಿರ್ವಾಹಕ ಸಾಗರ ಇಂಗಳಗಿ ಮತ್ತು ನಿರ್ದೇಶಕರು, ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.

ರಾಜ್ಯ ರಾಜಕಾರಣದಲ್ಲಿ ಸಂಚಲನ: ಬಿಜೆಪಿ ಮುಖಂಡರು ಸೋಮವಾರ ಕಾಂಗ್ರೆಸ್ ಸೇರ್ಪಡೆ

Related Articles

Back to top button