Latest

ಬೆಳಗಾವಿಯ 3 ಕೊಳಗೇರಿಗಳಲ್ಲಿ ಮೆಘಾ ಆರೋಗ್ಯ ತಪಾಸಣೆ ಶಿಬಿರ

   

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಆರೋಗ್ಯದ ಅರಿವು, ಸ್ವಚ್ಛತೆ ಹಾಗೂ ಸರಳ ಜೀವನ ಪದ್ದತಿಯಿಂದ ನಿರೋಗಿಯಾಗಿ ಜೀವನ ನಡೆಸಬಹುದಾಗಿದೆ. ಆದ್ದರಿಂದ ನಗರ ಗ್ರಾಮಗಳೆನ್ನದೇ ಎಲ್ಲರೂ ಇದರ ಅರಿವನ್ನು ಹೊಂದುವದು ಅತ್ಯವಶ್ಯಕವಾಗಿ ಎಂದು ಬೆಳಗಾವಿ ಪ್ರೊಪೆಶನಲ್ ಫೋರಂನ ಅಧ್ಯಕ್ಷ ಬಿ ಎಸ್ ಪಾಟೀಲ ಹೇಳಿದರು.

Home add -Advt

ಅವರು ಬೆಳಗಾವಿಯ ಮೂರು  ಕೊಳಗೇರಿಗಳಾದ ಅನಗೋಳನ ಕುರುಬರಗಲ್ಲಿ, ವಂಟಮುರಿ ಕಾಲೊನಿ ಹಾಗೂ ಗಾಂಧಿ ನಗರದ ಬಂಟರ ಭವನದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತಯ ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ, ಲೇಕ್ ವ್ಯೂ ಆಸ್ಪತ್ರೆ, ವಿಜಯ ಆಸ್ಪತ್ರೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಭಾರತೀಯ ವೈದ್ಯರ ಸಂಘ ಬೆಳಗಾವಿ ಶಾಖೆ ಮತ್ತು ಭಾರತೀಯ ದಂತ ವೈದ್ಯರ ಸಂಘ ಬೆಳಗಾವಿ ಶಾಖೆ ಇವರ ಸಹಯೋಗದಲ್ಲಿ ಬೆಳಗಾವಿ  ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡುತ್ತಿದ್ದರು.

ಮಲೀನತೆಯಿಂದ ಕೂಡಿದ ಪರಿಸರ ಎಲ್ಲ ರೋಗಗಳ ಮೂಲವಾಗಿದೆ. ಆದ್ದರಿಂದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಸಂಘಟಕರಲ್ಲಿ ಒಬ್ಬರಾದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ, ದೇಶದಲ್ಲಿ ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲಿ ನಮ್ಮ ಬೆಳಗಾವಿಯು ಒಂದಾಗಿದ್ದು ಜನರ ಆರೋಗ್ಯ ಕಾಪಾಡುವಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳೆಲ್ಲ ಒಟ್ಟಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಎನ್ನಿಸುತ್ತದೆ. ಅದರಲ್ಲೂ ಸ್ಮಾರ್ಟಸಿಟಿ ಕಾರ್ಯಕ್ರಮದಲ್ಲಿ ಅಗ್ರಪಟ್ಟಿಯಲ್ಲಿರುವ  ಬೆಳಗಾವಿಯ ನಾಗರಿಕರು ಆರೋಗ್ಯದ ಅರಿವನ್ನು ಹೊಂದಬೇಕು. ಇದರಿಂದ ನಗರವು ಅಭಿವೃದ್ದಿ ಹೊಂದುವುದರಲ್ಲಿ ಎರಡು ಮಾತಿಲ್ಲ ಎಂದರು.
ಇನ್ನೊಬ್ಬ ಮುಖ್ಯ ಸಂಘಟಕ ಡಾ ಹೆಚ್ ಬಿ ರಾಜಶೇಖರ ಮಾತನಾಡಿ, ಕೊಳಗೇರಿಗಳನ್ನು ಎಲ್ಲ ನಗರಗಳಲ್ಲಿ ಸರ್ವೇಸಾಮನ್ಯವಾಗಿ ಕಾಣಬಹುದಾಗಿದೆ. ಆದರೆ ಸರಿಯಾದ ನಿರ್ವಹಣೆಯ ಕೊರೆತೆಯಿಂದಾಗಿ ರೋಗಗಳ ಮೂಲ ಸ್ಥಾನಗಳಾಗಿವೆ. ಆದ್ದರಿಂದ ವೈದ್ಯಕೀಯ ಪರಿಣಿತಿ ಹೊಂದಿದ ನಾವೆಲ್ಲರೂ ಅವರಿಗೆ ಆರೋಗ್ಯದ ಅರಿವು ನೀಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಪ್ರೊಪೆಶನಲ್ ಫೋರಂನ  ಖಜಾಂಚಿ  ಆನಂದ ಹಾವನ್ನವರ, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ ಬಿ ಎಸ್ ಮಾಹಾಂತಶೆಟ್ಟಿ ಎಲ್ಲ ಸಂಘಟಕ ಸಂಸ್ಥೆಗಳ ಸಿಬ್ಬಂದಿ ಭಾಗವಹಿಸಿದ್ದರು.
ಈ ಶಿಬಿರದಲ್ಲಿ ಸುಮಾರು 1300 ಕ್ಕೂ ಅಧಿಕ ಕೊಳಗೇರಿ ನಿವಾಸಿಗಳನ್ನು ಉಚಿತವಾಗಿ ತಪಾಶಿಸಿ ಔಷಧಿಗಳನ್ನು ವಿತರಿಸಲಾಯಿತು. ಅನಗೋಳದ ಕುರುಬರಗಲ್ಲಿಯ ಕೇಂದ್ರದಲ್ಲಿ 400 ಕ್ಕೂ ಅಧಿಕ ರೋಗಿಗಳನ್ನು ತಪಾಶಿಸಲಾಯಿತು. ಗಾಂಧೀನಗರದ ಬಂಟರ ಭವನದಲ್ಲಿ 575 ಕ್ಕೂ ಅಧೀಕ ಕೊಳಗೇರಿನಿವಾಸಿಗಳನ್ನು ತಪಾಶಿಸಲಾಯಿತು. ಅದೇ ರೀತಿ ವಂಟಮುರಿ ಕಾಲೋನಿಯ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ 350 ಕ್ಕೂ ಅಧಿಕ ಕೊಳಗೇರಿನಿವಾಸಿಗಳನ್ನು ತಪಾಶಿಸಲಾಯಿತು. 

Related Articles

Back to top button