Kannada News

​ಮಠಾಧೀಶರ ​ಸಂಗದಿಂದ ಮನಸ್ಸಿಗೆ ನೆಮ್ಮದಿ, ಜೀವನ ಪಾವನ – ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ​ ಬೆಳಗಾವಿ – ತಪಸ್ಸು ಮಾಡಿ ಆ ಸ್ಥಾನಕ್ಕೇರಿರುವ ಮಠಾಧೀಶರ ದರ್ಶನ ಮತ್ತು ಆಶಿರ್ವಾದ ಪಡೆಯುವುದೇ ಒಂದು ಭಾಗ್ಯ. ಅವರ ಪಾದ ಸ್ಪರ್ಷದಿಂದ ನಮ್ಮ ಜೀವನ ಪಾವನವಾಗುತ್ತದೆ. ಅಂತವರ ಸಂಗದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ​ ಹೇಳಿದರು. ​
 
ಬೆಳಗಾವಿ ತಾಲೂಕಿನ ಅರಳೀಕಟ್ಟಿ ಗ್ರಾಮದ ಶ್ರೀ ತೋಂಟದಾರ್ಯ ವಿರಕ್ತ ಮಠದ​ ಶ್ರೀ ಶಿವಮೂರ್ತಿ  ಮಹಾಸ್ವಾಮಿಗಳ ಮೌನಾನುಷ್ಠಾನ ಮಂಗಲ ಸಮಾರಂಭ​ದಲ್ಲಿ  ಮಂಗಳವಾರ ಅವರು ಮಾತನಾಡಿದರು. ಜೀವನದಲ್ಲಿ ಎಲ್ಲವನ್ನೂ ತೊರೆದು ಸನ್ಯಾಸತ್ವ ಸ್ವೀಕರಿಸಿ ಕಠಿಣವಾದ ಆಚರಣೆಯೊಂದಿಗೆ ಮಠಾಧೀಶರಾಗುವುದು ಸುಲಭದ ಮಾತಲ್ಲ. ನಮಗೆ ಆ ರೀತಿಯ ಜೀವನ ಸಾಧ್ಯವಿಲ್ಲ. ಆದರೆ ಬದುಕಿನ ಕೆಲವು ಕ್ಷಣಗಳನ್ನು ಅವರೊಂದಿಗೆ ಕಳೆಯುವುದೇ ದೊಡ್ಡ ಪುಣ್ಯ ಎಂದು ಅವರು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು​ ಮುರಗೋಡ ದುರದುಂಡೇಶ್ವರ ಮಠದ​ ಶ್ರೀ ನೀಲಕಂಠ ಮಹಾಸ್ವಾಮಿಗಳು ​ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿಯ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಹುಕ್ಕೇರಿ ವೀರಕ್ತಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಕುಂದರಗಿ ಅಡವಿಸಿದ್ದೇಶ್ವರ ಮಠ​ದ​ ಶ್ರೀ ​ ಅಮರಸಿದ್ದೇಶ್ವರ ಮಹಾಸ್ವಾಮಿಗಳು, ಮುತ್ನಾಳ ಕೇದಾರ ಶಾಖಾ ಮಠದ ಶ್ರೀ  ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಅರಳೀಕಟ್ಟಿ ವಿರಕ್ತಮಠದ ಶ್ರೀ ​  ಶಿವಮೂರ್ತಿ ಮಹಾಸ್ವಾಮಿಗಳು, ದೇವರಶೀಗಿಹಳ್ಳಿಯ ಶ್ರೀ ​ ವೀರೇಶ್ವರ ಮಹಾಸ್ವಾಮಿಗಳು, ನರಗುಂದ ವಿರಕ್ತಮಠದ ಶ್ರೀ  ಶಿವಕುಮಾರ ಮಹಾಸ್ವಾಮಿಗಳು, ಬೆಳಗಾವಿ ಕಾರಂಜಿಮಠದ ​ ಶ್ರೀ ಶಿವಯೋಗಿ ದೇವರು, ತಾರೀಹಾಳ ಅಡವಿಸಿದ್ದೇಶ್ವರಮಠದ ​ ಶ್ರೀ ಅಡವೀಶ ದೇವರು, ಘಟಪ್ರಭಾದ‌  ಶ್ರೀ ಶಿವಾನಂದ ದೇವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button