
ಪ್ರಗತಿವಾಹಿನಿ ಸುದ್ದಿ, ರಾಂಚಿ: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಕಾಂಗರೂ ನ್ಯಾಯಾಲಯ ನಡೆಸುತ್ತಿದ್ದು ಇವು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ರಾಂಚಿಯ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಇತ್ತೀಚೆಗೆ, ಮಾಧ್ಯಮಗಳು ಕಾಂಗರೂ ನ್ಯಾಯಾಲಯಗಳನ್ನು ನಡೆಸುತ್ತಿವೆ. ಕೆಲವೊಮ್ಮೆ ಅನುಭವಿ ನ್ಯಾಯಾಧೀಶರು ಕೂಡ ಸಮಸ್ಯೆಗಳ ಬಗ್ಗೆ ನಿರ್ಧರಿಸಲು ಕಷ್ಟವಾಗುತ್ತದೆ. ನ್ಯಾಯ ವಿತರಣೆಯನ್ನು ಒಳಗೊಂಡಿರುವ ವಿಷಯಗಳ ಬಗ್ಗೆ ಅನಪೇಕ್ಷಿತ ಮತ್ತು ನಿರ್ದಿಷ್ಟ ಅಜೆಂಡಾ ಆಧರಿಸಿದ ಚರ್ಚೆಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಕ ಎಂದು ಅವರು ಹೇಳಿದರು.
“ಮುದ್ರಣ ಮಾಧ್ಯಮ ಇನ್ನೂ ಒಂದು ನಿರ್ದಿಷ್ಟ ಮಟ್ಟದ ಹೊಣೆಗಾರಿಕೆಯನ್ನು ಹೊಂದಿದೆ. ಆದರೆ ಸಾಮಾಜಿಕ ಜಾಲತಾಣಗಳು ನ್ಯಾಯಾಲಯಗಳ ವಿಚಾರಣೆಯ ವಿಷಯಗಳ ಬಗ್ಗೆ ಸಂವಾದಗಳನ್ನು ನಡೆಸಿ ತಪ್ಪು ಮಾಹಿತಿಗಳನ್ನು ಬಿತ್ತುತ್ತ ನ್ಯಾಯಾಧೀಶರ ವಿರುದ್ಧ ಮತ್ತು ಪ್ರಕರಣಗಳ ಕುರಿತು ಸಂಯೋಜಿತ ಪ್ರಚಾರಗಳನ್ನು ನಡೆಸುತ್ತಿವೆ” ಎಂದು ಅವರು ಹೇಳಿದರು.
ಇತ್ತೀಚೆಗೆ ಸುಪ್ರೀಂ ಕೋರ್ಟ್ನ ಮತ್ತೊಬ್ಬ ನ್ಯಾಯಾಧೀಶ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರು ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ.
ಪೊಲೀಸ್ ಕಮಿಷ್ನರ್ ಕಚೇರಿ ಬಳಿಯೇ ದರೋಡೆ; ಕಾರಲ್ಲಿದ್ದ 4.5 ಲಕ್ಷ ಕದ್ದು ಎಸ್ಕೇಪ್ ಆದ ಕಳ್ಳರು