Belagavi NewsBelgaum NewsCrimeKannada NewsKarnataka NewsLatest

*ನೀರು ಹಾಯಿಸುವ ವಿಚಾರಕ್ಕೆ ಗಲಾಟೆ; ತಮ್ಮನ ಚಟ್ಟ ಕಟ್ಟಿದ ಅಣ್ಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಈ ಹಂದೆ ಅಣ್ಣ ತಮ್ಮಂದಿರ ನಡುವೆ ದ್ವೇಷ ಇತ್ತು. ಆದರೆ ಹೊಲದಲ್ಲಿ ನೀರು ಹರಿಸುವಾಗ ಮಾತಿಗೆ ಮಾತು ಬೆಳೆದು ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯಲ್ಲಪ್ಪ ದೇಮಪ್ಪ ಸಣ್ಣಮ್ಮನವರ (45) ಕೊಲೆಯಾಗಿರುವ ವ್ಯಕ್ತಿ. ಮಹಾದೇವಪ್ಪ ದೇವಪ್ಪ ಸಣ್ಣಮ್ಮನವರ (55) ಬಂಧಿತ ಆರೋಪಿಗಳು.

Home add -Advt

ಕೊಲೆ ಮಾಡಿದ ಆರೋಪಿ ಮಹಾದೇವಪ್ಪ ದೇವಪ್ಪ ಸಣ್ಣಮ್ಮನವರ ಹೊವಿನ ಹೊಲದಲ್ಲಿ ಗಿಡಗಳು ಮುರಿದು ಬಿದಿದ್ದವು ಅದಕ್ಕೆ ನೀನೆ ನನ್ನ ಜಮೀನದಲ ಹೂವಿನ ಗಿಡಗಳನ್ನು ಮುರಿದಿದ್ದಿಯಾ ಎಂದು ತಮ್ಮನ ಜೊತೆ ಜಗಳ ಮಾಡಿ ಕೈಯಲ್ಲಿದ್ದ ಸಲಿಕೆಯಿಂದ ಹೋಡೆದು ಕೊಲೆ ಮಾಡಿದ್ದಾನೆ.

ಈ ಕುರಿತು ಲಕ್ಷ್ಮೀ ಯಲ್ಲಪ್ಪ ಸಣ್ಣಮ್ಮನವರ ಇವರು ಮುರಗೋಡ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಮುರಗೋಡ ಪೊಲೀಸ್ ಠಾಣೆಯ ಸಿಪಿಐ ಆಯ್ ಎಂ ಮಠಪತಿ ಬೇಟೆ ನೀಡಿ ತನಿಖೆ ಕೈಗೊಂಡಿದ್ದಾರೆ.

Related Articles

Back to top button