Belagavi NewsBelgaum NewsKannada NewsKarnataka NewsLatest

ಬಾಲ ಪ್ರತಿಭೆ ದಿಯಾ ಹೆಗಡೆಗೆ ಬೆಳಗಾವಿಯಲ್ಲಿ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಗರ ತಾಲೂಕಿನ ಬಂದಗದ್ದೆ ಗ್ರಾಮ ನಿವಾಸಿ, ಝೀ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ರಾಷ್ಟ್ರಮಟ್ಟದ ಮಕ್ಕಳ ಸಾಹಿತ್ಯ ಜಿಬಿ ಸಮ್ಮೇಳನದಲ್ಲಿ ಸಂಗೀತ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾಳೆ.

ಈ ವರ್ಷದ ಮೈಸೂರಿನ ಮಹಿಳಾ ಮತ್ತು ಮಕ್ಕಳ ದಸರಾ ಉತ್ಸವವನ್ನು ಅವಳ ಕೈಯಿಂದ ಉದ್ಘಾಟಿಸುವ ಗೌರವವನ್ನು ರಾಜ್ಯ ಸರ್ಕಾರ ನೀಡಿದೆ. ಸಣ್ಣ ವಯಸ್ಸಿನಲ್ಲೇ ಸಾಧನೆ ತೋರಿದ ಬಾಲ ಪ್ರತಿಭೆ ದಿಯಾ ಹೆಗಡೆಯವರಿಗೆ ಬೆಳಗಾವಿ ಹನುಮಾನ್ ನಗರದ ನಾಗರಿಕರಿಂದ ಅ. 22 ರ ರವಿವಾರ ಹನುಮಾನ್ ನಗರದ ಹನುಮಾನ್ ಮಂದಿರದ ಆವಾರದಲ್ಲಿರುವ ಗ್ಲಾಸ್ ಹೌಸ್ ಸಭಾಗೃಹದಲ್ಲಿ ಬೆಳಗ್ಗೆ 11.30 ಘಂಟೆಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

Home add -Advt

ವೃತ್ತಿಯಲ್ಲಿ ವಕೀಲರಾದ, ಕೃಷಿಕ ಕುಟುಂಬದ ಹಿನ್ನೆಲೆಯ ಬಿ. ಎಂ. ವೆಂಕಟೇಶ ಹಾಗೂ ಅಪರ್ಣಾ ದಂಪತಿ ಪುತ್ರಿ, ಕರ್ನಾಟಕದಾದ್ಯಂತ ಹಾಗೂ ಮಹಾರಾಷ್ಟ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯತೆ ಗಳಿಸಿದ ಅಪರೂಪದ ಬಾಲ ಸಾಧಕಿ. ಪ್ರಾರಂಭದಲ್ಲಿ ಈ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ವಾಹಿನಿಯು ಅವಳನ್ನು ವಿಶೇಷ ಕಲಾವಿದೆಯಾಗಿ ರಾಜ್ಯಕ್ಕೆ 2022-23 ರಲ್ಲಿ ಪರಿಚಯಿಸಿತು. ಬಹುಮುಖ ಪ್ರತಿಭೆಯ ಈ ಬಾಲಕಿಗೆ ಈಗ ರಾಷ್ಟ್ರ ಮಟ್ಟದ ಗೌರವ ಸಂದಿದೆ.
ಕರ್ನಾಟಕದಾದ್ಯಂತ ಸನ್ಮಾನಗೊಂಡ ಅವಳನ್ನು ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಸನ್ಮಾನಿಸಲಾಗುತ್ತಿದೆ.

ಹನುಮಾನ್ ಮಂದಿರದ ಮಹಾಪ್ರಸಾದ ಕಮಿಟಿ ಮತ್ತು ಶ್ರೀ ಲಲಿತಾ ಆರಾಧನಾ ಮಂಡಳಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಬನ್ನಿ ಬಾಲ ಪ್ರತಿಭೆಯನ್ನು ಪ್ರೋತ್ಸಾಹಿಸಿ.

Related Articles

Back to top button