Kannada NewsKarnataka NewsLatest

ಶಾಸಕ ಗಣೇಶ ಹುಕ್ಕೇರಿಯಿಂದ ನಿರಂತರ ಜನಜಾಗ್ರತಿ ಅಭಿಯಾನ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚಿಕ್ಕೋಡಿ -ಸದಲಗಾ ಶಾಸಕ ಗಣೇಶ ಹುಕ್ಕೇರಿ ನಿರಂತರವಾಗಿ ಕ್ಷೇತ್ರದಲ್ಲಿ ಜನಜಾಗ್ರತಿ ಅಭಿಯಾನ ಹಮ್ಮಿಕೊಂಡಿದ್ದಾರೆ.

ಕೊರೋನಾ ವೈರಸ್ ಕಾಲಿಟ್ಟ ದಿನದಿಂದಲೇ ಅಧಿಕಾರಿಗಳ ಸಭೆ, ಕ್ಷೇತ್ರದಲ್ಲಿ ಜನಜಾಗ್ರತಿ ಹಾಗೂ ಮಾಸ್ಕ್, ಸೆನಿಟೈಸರ್ ಸೇರಿದಂತೆ ವಿವಿಧ ಸಾಮಗ್ರಿ ವಿತರಣೆಯಲ್ಲಿ ಗಣೇಶ ಹುಕ್ಕೇರಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Home add -Advt

ಗುರುವಾರ ಚಿಕ್ಕೋಡಿ ತಾಲೂಕಿನ ಜೋಡಕುರಳಿ, ಕೇರೂರ, ಕಾಡಾಪೂರ, ನಣದಿ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಜೊತೆಗೆ, ಅವುಗಳ ಪರಿಹಾರಕ್ಕೆ ಅಧಿಕಾರಿಗಳಿಗೆ  ಸೂಚನೆ ನೀಡಿದರು.

ಅನವಶ್ಯಕವಾಗಿ ಸಾರ್ವಜನಿಕರು  ಮನೆಯಿಂದ  ಹೊರಗಡೆ ಬರದಂತೆ ಸಾರ್ವಜನಿಕರಲ್ಲಿ ವಿನಂತಿಸಿದ ಗಣೇಶ ಹುಕ್ಕೇರಿ,  ಪಿ.ಡಿ.ಓ , ಸ್ಥಳೀಯ ಚುಣಾವಣಾ ಪ್ರತಿನಿಧಿಗಳಿಗೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರೊಂದಿಗೆ ಚರ್ಚಿಸಿದರು.

ನಂತರ  ಉಚಿತವಾಗಿ 8,000 ಮಾಸ್ಕಗಳನ್ನು ನೀಡಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ವ್ಯವಸ್ಥಿತವಾಗಿ ಹಂಚಲು ತಿಳಿಸಿದರು. ಶಾಸಕರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Related Articles

Back to top button