Latest

ಕರ್ನಾಟಕದ ಸ್ಮಾರ್ಟ್ ನಗರಗಳಲ್ಲಿ ರೂ.1721 ಕೋಟಿ ಬಳಕೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ : “ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಕರ್ನಾಟಕದ ನಗರಗಳ ಯೋಜನೆಗಳ” ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅದಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆಯವರ ಪ್ರಶ್ನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಹರದೀಪ ಸಿಂಗ್ ಪುರಿ ಅವರು ಉತ್ತರ ಪೂರೈಸಿದ್ದಾರೆ.

ಕೇಂದ್ರ ಸರ್ಕಾರವು ಭಾರತದಲ್ಲಿ 100 ನಗರಗಳನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಪಡಿಸಲು ಸ್ಮಾರ್ಟ್ ಸಿಟಿ ಮಿಷನ್ (ಎಸ್‌ಸಿಎಮ್)ನ್ನು ಪ್ರಾರಂಭಿಸಿದೆ. ಅದರಲ್ಲಿ ಕರ್ನಾಟಕದ ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ತುಮಕೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದ 817 ಯೋಜನೆಗಳಿಗೆ ಟೆಂಡರಾಗಿ ಅದರಲ್ಲಿ ರೂ.17,164.45 ಕೋಟಿ ಮೊತ್ತದ 786 ಯೋಜನೆಗಳ ಕೆಲಸದ ಆದೇಶಗಳನ್ನು ನೀಡಲಾಗಿದೆ. ರೂ.15,364.84 ಕೋಟಿ (89%) ಇವುಗಳಲ್ಲಿ 449 ಯೋಜನೆಗಳ ಮೌಲ್ಯ 4,255.34 ಕೋಟಿ (25%) ಯೋಜನೆಗಳು ಪೂರ್ಣಗೊಂಡಿವೆ. ಸ್ಮಾರ್ಟ್ ಸಿಟಿ ಯೋಜನೆಗಳನ್ನು ಆಯ್ಕೆ ಮಾಡಿದ ದಿನಾಂಕದಿಂದ 5 ವರ್ಷಗಳಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕರ್ನಾಟಕದ ಸ್ಮಾರ್ಟ್ ನಗರಗಳಿಗೆ ರೂ.1721 ಕೋಟಿ ಈಗಾಗಲೇ ಬಳಸಿಕೊಂಡಿವೆ ಮತ್ತು ಒಟ್ಟು ಸಲ್ಲಿಸಿದ ಪ್ರಸ್ತಾವನೆಗಳ ರೂ. 1563 ಕೋಟಿ ಶೇ.91% ರಷ್ಟು ಹಣವನ್ನು ಈ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನಗರ ಮಟ್ಟದಲ್ಲಿ ಎಸ್‌ಸಿಎಮ್ ಅನ್ನು ಜಾರಿಗೆ ತರುವ ಉದ್ದೇಶಕ್ಕಾಗಿ ವಿಶೇಷ ಉದ್ದೇಶದ ಸಮಿತಿ (ಎಸ್‌ಪಿವಿ) ಯನ್ನು ರಚಿಸಿದೆ. ಆಯಾ ರಾಜ್ಯಗಳ ಮತ್ತು ನಗರ ಸ್ಥಳಿಯ ಸಂಸ್ಥೆಗಳ (ಯುಎಲ್‌ಬಿ)ಗಳು ಜಂಟಿಯಾಗಿ 50:50 ಅನುಪಾತದಲ್ಲಿ. ನಗರಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಮತ್ತು ಸುಧಾರಣೆಗಳ ನಿಭಾಯಿಸಲು ವಿವಿಧ ಹಂತಗಳಲ್ಲಿ ವಿಡಿಯೋ ಸಮ್ಮೇಳನಗಳೂ ವಿಮರ್ಶೆ ಸಭೆಗಳೂ, ಕ್ಷೇತ್ರ ಭೇಟಿಗಳೂ, ಪ್ರಾದೇಶಿಕ ಕಾರ್ಯಾಗಾರಗಳ ಮೂಲಕ ಸಚಿವಾಲಯವು ನಿಯಮಿತವಾಗಿ ರಾಜ್ಯಗಳ ಸ್ಮಾರ್ಟ್ ನಗರಗಳೊಂದಿಗೆ ಸಂವಹನ ನಡೆಸುತ್ತಿದೆ. ರಾಜ್ಯ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಹೈ ಪವರ್ ಸ್ಟೀರಿಂಗ್ ಕಮಿಟಿ (ಎಚ್‌ಪಿಎಸ್‌ಸಿ) ಸ್ಥಾಪಿಸಲಾಗಿದೆ ಮತ್ತು ರಾಷ್ಟ್ರಮಟ್ಟದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಅಪೆಕ್ಸ್ ಸಮಿತಿಯ ಎಸ್‌ಸಿಎಂ ದ ಅನುಷ್ಠಾನದ ಮೇಲ್ವಿಚಾರಣೆಯನ್ನು ಮಾಡುತ್ತಿದೆ ಅದಲ್ಲದೆ ಸಚಿವಾಲಯದ ನಾಮನಿರ್ದೇಶಿತ ನಿರ್ದೇಶಕರು ನಿಯಮಿತವಾಗಿ ಆಯಾ ನಗರಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಕೃಷಿಕರಿಗೆ ತಾಂತ್ರಿಕ ಬೆಂಬಲ ಮತ್ತು ತಾಂತ್ರಿಕ ಉನ್ನತೀಕರಣದ ಲಾಭ

Home add -Advt

Related Articles

Back to top button