Latest

ಎಂಟಿಬಿಗೆ ಪರಿಷತ್ ಸ್ಥಾನ ಗ್ಯಾರಂಟಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಪರಿಷತ್ ಸ್ಥಾನಕ್ಕಾಗಿ ಎಂಟಿಬಿ ನಾಗರಾಜ್ ಭಾರೀ ಲಾಭಿನಡೆಸಿದ್ದು, ಕಂದಾಯ ಸಚಿವ ಆರ್.ಅಶೋಕ್ ಎಂಟಿಬಿಗೆ ಬೆಂಬಲ ನೀಡಿದ್ದಾರೆ. ನಮ್ಮ ಸರ್ಕಾರ ಬರುವಲ್ಲಿ ಎಂಟಿಬಿ ನಾಗರಾಜ್ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಇವರಿಗೆ ಪರಿಷತ್ ಸ್ಥಾನ‌ ನೀಡಬೇಕಿದೆ ಎಂದು ಹೇಳಿದ್ದಾರೆ.

ಇಂದು ಎಂಟಿಬಿ ನಾಗರಾಜ್ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಗೃಹ ಸಚಿವ ಬಸವರಾಜ‌ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ಆರ್. ಅಶೋಕ್, ಎಂಟಿಬಿ ನಾಗರಾಜ ಅವರು, ಶಾಸಕ ಸ್ಥಾನ , ಮಂತ್ರಿ ಸ್ಥಾನವನ್ನ ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಇವರಿಗೆ ಪರಿಷತ್ ಸ್ಥಾನ‌ನೀಡಬೇಕಿದೆ ಎಂದರು.

‌ಅಲ್ಲದೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಎಂಟಿಬಿಗೆ ಮಾತು ಕೊಟ್ಟಿದ್ದಾರೆ. ಹಾಗಾಗಿ ನಾಗರಾಜ ಅವರನ್ನು ಎಂಎಲ್ಸಿ ಮಾಡಬೇಕು. ಅಲ್ಲದೇ ಎಂಟಿಬಿ ನಾಗರಾಜರನ್ನು ಪಕ್ಷಕ್ಕೆ ನಾನೇ ಕರೆ ತಂದಿದ್ದೇನೆ. ಹಾಗಾಗಿ ಸ್ಥಾನ‌ಮಾನ ಕೊಡಿಸುವ ಜವಾಬ್ದಾರಿಯೂ ನನ್ನ ಮೇಲಿದೆ. ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ‌ ಪಕ್ಷದ ಅಧ್ಯಕ್ಷ‌ ನಳೀನಕುಮಾರ ಕಟೀಲ್ ಜೊತೆ ಚರ್ಚೆ ಮಾಡಿ ಅಂತಿಮ‌ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಇನ್ನು ಆರ್ ಶಂಕರ್ ಹಾಗೂ ಹೆಚ್ ವಿಶ್ವನಾಥ ಕೂಡ ನಮ್ಮ ಸರ್ಕಾರ ಬರುವಲ್ಲಿ ಶ್ರಮಪಟ್ಟಿದ್ದಾರೆ. ಅವರಿಗೂ ಸ್ಥಾನ‌ಮಾನ ನೀಡಬೇಕು. ಈ ಬಗ್ಗೆಯೂ ಯಡಿಯೂರಪ್ಪನವರು ಹಾಗೂ ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡ್ತಾರೆ ಎಂದರು.

Home add -Advt

Related Articles

Back to top button