Election NewsPolitics

*ಸಿ.ಪಿ.ಯೋಗೇಶ್ವ‌ರ್ ಅವನತಿ ಆಗಲಿದೆ: ಹೆಚ್.ಡಿ. ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ : ಚನ್ನಪಟ್ಟಣದ ಉಪಚುನಾವಣೆಯಿಂದಲೇ ಸಿ.ಪಿ.ಯೋಗೇಶ್ವ‌ರ್ ಅವನತಿ ಆಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ

ಇಂದು ಹಾಸನಾಂಬೆಯ ದರ್ಶನ ಪಡೆದ ನಂತರ ಮಾತನಾಡಿದ ಅವರು, ಬರೆದಿಟ್ಟುಕೊಳ್ಳಿ ನಿಖಿಲ್ ಗೆಲ್ಲುವುದು ನಿಶ್ಚಿತ, ಯೋಗೇಶ್ವರ್ ಸೋಲು ಖಚಿತ ಎಂದು ಹೆಚ್‌ಡಿಕೆ ಗುಡುಗಿದರು. ಏನೇ ಕುತಂತ್ರ ಮಾಡಿದರೂ ನಿಖಿಲ್ ಗೆಲ್ಲುತ್ತಾರೆ. ಚನ್ನಪಟ್ಟಣದ ನಮ್ಮ ಕಾರ್ಯಕರ್ತರು ನಿಖಿಲ್‌ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇನ್ನು ಬಿಜೆಪಿ ಜೊತೆ ಜೆಡಿಎಸ್‌ಗೆ ಮೈತ್ರಿ ಮಾಡಿಸಿದ್ದು ನಾನೇ, ಲೋಕಸಭೆ ಚುನಾವಣೆ ವೇಳೆ ಕುಮಾರಸ್ವಾಮಿಯನ್ನು ಡಾ.ಮಂಜುನಾಥ್ ಅವರನ್ನ ಗೆಲ್ಲಿಸಿದ್ದು ನನ್ನನ್ನು ಮಂತ್ರಿ ಮಾಡಿದ್ದು ಅವರೇ ಅಂತೆ ಎಂದು ಯೋಗೇಶ್ವರ್ ವಿರುದ್ಧ ಕುಟುಕಿದರು. ಬಿಜೆಪಿಯ ಹೈಕಮಾಂಡ್‌ನಿಂದ ಮನವೊಲಿಸಿ ಬಿ.ಫಾರಂ ಪಡೆಯಲಾಗದೇ ಕಾಂಗ್ರೆಸ್ ಗೆ ಹೋಗಿಲ್ವಾ ಎಂದು ವ್ಯಂಗ್ಯವಾಡಿದರು.

Home add -Advt

Related Articles

Back to top button