Politics

*ಉಚ್ಛಾಟಿಸಲು ಅವರೇನು ರೇಪ್ ಮಾಡಿರಲಿಲ್ಲ, ಇಂಜಕ್ಷನ್ನೂ ಕೊಟ್ಟಿರಲಿಲ್ಲ: ಬಿಜೆಪಿಗೆ ಟಾಂಗ್ ನೀಡಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ.ಸೋಮಶೇಖರ್ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿರುವುದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್, ಪರೋಕ್ಷವಾಗಿ ಶಾಸಕ ಮುನಿರತ್ನಗೆ ತಿರುಗೇಟು ನೀಡುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಬಿಜೆಪಿಯವರು ಮುತ್ತು, ರತ್ನಗಳನ್ನಷ್ಟೇ ಇಟ್ಟುಕೊಳ್ಳಲಿ ಬಿಡಿ. ಅವರ ಪಕ್ಷ, ಅವರ ತೀರ್ಮಾನ ಎಂದು ಹೇಳಿದರು. ಇದೇ ವೇಳೆ ಹೆಬ್ಬಾರ್ ಹಾಗೂ ಸೋಮಶೇಖರ್ ಅವರನ್ನು ಉಚ್ಛಾಟಿಸಲು ಅವರೇನು ವಿಧಾನಸೌಧದಲ್ಲಿ ರೇಪ್ ಮಾಡಿರಲಿಲ್ಲ, ಹೆಚ್ ಐವಿ ಇಂಜಕ್ಷನ್ನೂ ಕೊಟ್ಟಿರಲಿಲ್ಲವಲ್ಲ? ಆದರೂ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಬಿಜೆಪಿಯವರು ಮುತ್ತುರತ್ನಗಳನ್ನು ಬಿಟ್ಟು ಬೇರೆಯವರನ್ನು ಪಕ್ಷದಿಂದ ಹೊರ ಹಾಕುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

Home add -Advt

Related Articles

Back to top button