
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆ ಫಲಿತಾಂಶ ಹೊರಬಿದ್ದಿದೆ.
ತೀವ್ರ ಗಮನ ಸೆಳೆದಿದ್ದ ಖಾನಾಪುರ ಕ್ಷೇತ್ರದಿಂದ ಶಾಸಕಿ ಅಂಜಲಿ ನಿಂಬಾಳಕರ್ ಸೋಲು ಅನುಭವಿಸಿದ್ದಾರೆ. 2 ಮತಗಳ ಅಂತರದಿಂದ ಅರವಿಂದ ಪಾಟೀಲ ಗೆದ್ದಿದ್ದಾರೆ. ಅಂಜಲಿಗೆ 25 ಮತ, ಅರವಿಂದ ಪಾಟೀಲಗೆ 27 ಮತ ಬಿದ್ದಿದೆ.
ರಾಮದುರ್ಗದಲ್ಲಿ ಢವಣ್ ಮತ್ತು ನೇಕಾರರ ಕ್ಷೇತ್ರದಿಂದ ಕೃಷ್ಣ ಅನಿಗೋಳ್ಕರ್ ಗೆಲುವು ಸಾಧಿಸಿದ್ದಾರೆ. ಕೃಷ್ಣ ಅನಿಗೋಳ್ಕರ್ ಹೊರತುಪಡಿಸಿ ಉಳಿದೆಲ್ಲರೂ ಕತ್ತಿ, ಜಾರಕಿಹೊಳಿ ಬಣದವರು.
ಒಟ್ಟೂ 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. 3 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿತ್ತು.
ಸಂಬಂಧಿಸಿದ ಸುದ್ದಿಗಳು –
ಕತ್ತಿ, ಜಾರಕಿಹೊಳಿ ಸಹೋದರರಿಗೆ ಲಕ್ಷ್ಮಣ ಸವದಿ ಷರತ್ತು -ಪ್ರಗತಿವಾಹಿನಿ ವಿಶೇಷ
ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿಲ್ಲ, ಆದರೆ…. : ರಮೇಶ ಕತ್ತಿ
ಡಿಸಿಸಿ ಬ್ಯಾಂಕ್: 3 ಸ್ಥಾನಗಳಿಗೆ ಚುನಾವಣೆ ಘೋಷಣೆ
ಡಿಸಿಸಿ ಬ್ಯಾಂಕ್: ಅವಿರೋಧ ಆಯ್ಕೆಯಾದವರ ವಿವರ
ಬೆಳಗಾವಿ ಡಿಸಿಸಿ ಬ್ಯಾಂಕ್ ಎಲೆಕ್ಷನ್ ಗೆ ಕಾಂಗ್ರೆಸ್ ಎಂಟ್ರಿ: ಬಿಗ್ ಟ್ವಿಸ್ಟ್ -Exclusive
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ