Kannada NewsLatestNational

*BREAKING: ದೆಹಲಿ ಸ್ಫೋಟ ಪ್ರಕರಣ: ಅಲ್ ಪಹಾಲ್ ವಿವಿ ಮೇಲೆ ED ದಾಳಿ*

ಪ್ರಗತಿವಾಹಿನಿ ಸುದ್ದಿ: ದೆಹಲಿಯ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ ಪಹಾಲ್ ವಿವಿ ಮೇಲೆ ಇಡಿ ಅಧಿಕಾರಿಗಳು ದಿಢೀರ್ ದಾಳಿಡೆಸಿದ್ದಾರೆ.

ದೆಹಲಿಯ ಓಕ್ಲಾ ಪ್ರದೇಶದಲ್ಲಿರುವ ಅಲ್ ಪಹಾರ್ ವಿಶ್ವ ವಿದ್ಯಾಲಯದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ವಿಶ್ವ ವಿದ್ಯಾಲಯದ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Home add -Advt

ನ.10ರಂದು ಸಂಜೆ ದೆಹಲಿಯ ಕೆಂಪುಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿ ಐ 20ಕಾರು ಸ್ಫೋಟಗೊಂಡು 15ಜನರು ಬಲಿಯಾಗಿದ್ದರು. ಹಲವರು ಗಾಯಗೊಂಡಿದ್ದರು. ಕಾರು ಸ್ಫೋಟದಲ್ಲಿ ಉಗ್ರರ ಕೈವಾಡವಿರುದು ದೃಢಪಟ್ಟಿದೆ. ವೈಟ್ ಕಾಲರ್ ಉಗ್ರರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಬಹುತೇಕರು ದೆಹಲಿಯ ಅಲ್ ಪಹಾಲ್ ವಿವಿಯಲ್ಲಿಯೇ ವ್ಯಾಸಂಗ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದರು. ವಿವಿ ಲ್ಯಾಬ್ ನಿಂದಲೇ ಕೆಲ ಕೆಮಿಕಲ್ ಗಳನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ. ಈ ಹಿನ್ನೆಯಲ್ಲಿ ವಿವಿ ಮೇಲೆ ಇಡಿ ದಾಳಿ ನಡೆಸಿದೆ.

Related Articles

Back to top button